HEALTH TIPS

ಭೂಕುಸಿತ ದುರಂತ: ಯೋಗ ಕ್ಷೇಮ ಸಭೆಯಿಂದ ಮೊದಲ ಮನೆ ಹಸ್ತಾಂತರ

ವಯನಾಡ್: ವಯನಾಡ್ ದುರಂತದಿಂದ ಹಾನಿಗೊಳಗಾದವರಿಗೆ ನಿರ್ಮಿಸಿಕೊಡುವ ಮನೆಗಳಲ್ಲಿ ಮೊದಲ ಮನೆಯನ್ನು ಯೋಗ ಕ್ಷೇಮ ಸಭೆ ನಿರ್ಮಿಸಿ ಹಸ್ತಾಂತರಿಸಿದೆ. ವಯನಾಡಿನ ಚೀಕಲ್ಲೂರಿನ ಪೆÇಂಗಿನಿ ಭದ್ರಕಾಳಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕೀಲಿಕೈ ವಿತರಣೆ ಸಮಾರಂಭದಲ್ಲಿ ಸಚಿವ ವಿ.ಎನ್. ವಾಸವನ್ ಆನ್‍ಲೈನ್‍ನಲ್ಲಿ ಉದ್ಘಾಟಿಸಿದರು.

ಯೋಗ ವೆಲ್ಫೇರ್ ಸೊಸೈಟಿ ರಾಜ್ಯ ಅಧ್ಯಕ್ಷ ಅಕ್ಕಿರಾಮನ್ ಕಾಳಿದಾಸ ಭಟ್ಟತ್ತಿರಿ ಕೀಲಿ ವಿತರಣಾ ಸಮಾರಂಭವನ್ನು ನೆರವೇರಿಸಿದರು. ಮೊದಲ ಮನೆಯನ್ನು ಮೆಪ್ಪಾಡಿಯ ಮುಂಡಕೈ ಎಸ್‍ಆರ್ ಎಸ್ಟೇಟ್‍ನಲ್ಲಿರುವ ಸಂತೋಷ್ ಎಂಬವರಿಗೆ ಹಸ್ತಾಂತರಿಸಲಾಯಿತು. 23 ಲಕ್ಷ ರೂಪಾಯಿ ವೆಚ್ಚದಲ್ಲಿ ಎಲ್ಲಾ ಸೌಕರ್ಯಗಳನ್ನು ಹೊಂದಿರುವ 750 ಚದರ ಅಡಿ ಮನೆಯನ್ನು ನಿರ್ಮಿಸಲಾಗಿದೆ.

ಯೋಗಕ್ಷೇಮ ಸಭಾದ ರಾಜ್ಯ ಉಪಾಧ್ಯಕ್ಷ ಪಿ.ವಿ. ಶಿವದಾಸ್, ಕಾರ್ಯದರ್ಶಿ ಕೊಡುಪುನ್ನ ಕೃಷ್ಣನ್ ಪೋತ್ತಿ, ಕಣಿಯಂಬಟ್ಟ ಪಂಚಾಯಿತಿ ಅಧ್ಯಕ್ಷ ಕೆ.ವಿ. ರಜಿತಾ, ರವಿ ಪಂತಾಲ್, ಎ.ವಿ. ಸುಜೇಶ್ ಕುಮಾರ್, ಕೆ.ಡಿ. ದಾಮೋದರನ್, ಕಲ್ಪಮಂಗಲಂ ನಾರಾಯಣನ್ ನಂಬೂದಿರಿ, ಮಲ್ಲಿಕಾ ನಂಬೂದಿರಿ, ಕೆ.ಎನ್. ಶ್ರೀಜಿತ್, ಪೀನಿಕಾಡು ಈಶ್ವರನ್ ನಂಬೂದಿರಿ ಮತ್ತಿತರರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries