ತಿರುವನಂತಪುರಂ: ಅರ್ಧ ಬೆಲೆ ಹಗರಣಕ್ಕೆ ಸಂಬಂಧಿಸಿದ ಮೊದಲ ಪ್ರಕರಣದಲ್ಲಿ ಸಾಯಿಗ್ರಾಮ್ ಗ್ಲೋಬಲ್ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಮತ್ತು ಆರೋಪಿ ಆನಂದ್ ಕುಮಾರ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಮುವಾಟ್ಟುಪುಳ ಪೋಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಜಾಮೀನು ನೀಡಲಾಗಿದೆ. ಆನಂದ್ ಕುಮಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕøತಗೊಂಡ ನಂತರ ಅವರನ್ನು ಬಂಧಿಸಲಾಗಿತ್ತು. ನಂತರ, ಸುಮಾರು ಮೂವತ್ತು ಪ್ರಕರಣಗಳಲ್ಲಿ ಬಂಧನಗಳನ್ನು ಮಾಡಲಾಯಿತು. ಉಳಿದ ಪ್ರಕರಣಗಳಲ್ಲಿ ಜಾಮೀನು ಸಿಗದ ಕಾರಣ ಆನಂದಕುಮಾರ್ ಜೈಲಿನಲ್ಲೇ ಇರಲಿದ್ದಾರೆ.
ಪ್ರಸ್ತುತ ಜೈಲಿನಲ್ಲಿರುವ ಆನಂದ್ ಕುಮಾರ್ ಅರ್ಧಬೆಲೆ ವಂಚನೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ ಎಂದು ಹೈಕೋರ್ಟ್ ಹೇಳಿತ್ತು. ಆನಂದ್ ಕುಮಾರ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಆದೇಶದಲ್ಲಿ ನಿರ್ಣಾಯಕ ಹೇಳಿಕೆ ನೀಡಲಾಗಿದೆ. ಸ್ಕೂಟರ್ಗಳ ಭರವಸೆ ನೀಡಲಾಗಿದ್ದ ಮಹಿಳೆಯರಿಂದ ಟ್ರಸ್ಟ್ ನೇರವಾಗಿ ಹಣವನ್ನು ಪಡೆದಿದೆ ಎಂದು ತೋರಿಸುವ ದಾಖಲೆಗಳನ್ನು ಅಪರಾಧ ಶಾಖೆ ಹೈಕೋರ್ಟ್ಗೆ ಸಲ್ಲಿಸಿತ್ತು.
ಕೆ.ಎನ್. ಆನಂದಕುಮಾರ್ ಇಲ್ಲಿಯವರೆಗೆ ಹೇಳುತ್ತಿರುವುದೇನೆಂದರೆ, ಅನಂತುಕೃಷ್ಣನ್ ಅವರಿಂದ ಕಾನೂನುಬದ್ಧ ದೇಣಿಗೆ ಪಡೆದಿರುವುದನ್ನು ಹೊರತುಪಡಿಸಿ, ಅರ್ಧ ಬೆಲೆಯ ಸ್ಕೂಟರ್ ಯೋಜನೆಗೂ ಸಾಯಿಗ್ರಾಮ್ ಗ್ಲೋಬಲ್ ಟ್ರಸ್ಟ್ಗೂ ಯಾವುದೇ ಸಂಬಂಧವಿಲ್ಲ ಎಂದಾಗಿದೆ.
ಆದರೆ, ಆನಂದ್ ಕುಮಾರ್ ವಂಚನೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆನಂದ್ ಕುಮಾರ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಆದೇಶದಲ್ಲಿ ಈ ಉಲ್ಲೇಖ ಮಾಡಲಾಗಿದೆ.






