HEALTH TIPS

ವಂದೇ ಭಾರತ್ ಸಹಿತ ರೈಲುಗಳಿಗೆ ವಿತರಿಸಲು ಸಿದ್ಧಪಡಿಸಲಾದ ಹಳಸಿದ ಆಹಾರ ವಶ

ಕೊಚ್ಚಿ: ವಂದೇ ಭಾರತ್ ಸೇರಿದಂತೆ ರೈಲುಗಳಲ್ಲಿ ವಿತರಣೆಗಾಗಿ ತಯಾರಿಸಲಾಗಿದ್ದ ಹಳಸಿದ ಆಹಾರವನ್ನು ವಶಪಡಿಸಿಕೊಳ್ಳಲಾಗಿದೆ. ಕಡವಂತ್ರದಲ್ಲಿರುವ 'ಬೃದ್ಧವನ ಆಹಾರ ಉತ್ಪಾದನೆ' ಘಟಕದಲ್ಲಿ ನಗರಸಭೆ ಅಧಿಕಾರಿಗಳು ನಡೆಸಿದ ತಪಾಸಣೆಯ ಸಮಯದಲ್ಲಿ ಹಳಸಿದ ಆಹಾರ ಪತ್ತೆಯಾಗಿದೆ. ಆಹಾರವನ್ನು ಮುಚ್ಚದೆ ಹಾಗೆಯೇ ಬಿಡಲಾಗಿತ್ತು ಮತ್ತು ನೊಣಗಳು ಹಾರಾಡುವ ಸ್ಥಿತಿಯಲ್ಲಿತ್ತು.

ವಂದೇ ಭಾರತ್ ಸ್ಟಿಕ್ಕರ್‍ಗಳಿರುವ ಆಹಾರ ಪ್ಯಾಕೆಟ್‍ಗಳು ಸಹ ಇಲ್ಲಿ ಕಂಡುಬಂದಿವೆ. ಯಾವುದೇ ಮಾನದಂಡಗಳನ್ನು ಪಾಲಿಸದೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ, ಸಂಸ್ಥೆಯನ್ನು ಮುಚ್ಚಲು ನಿರ್ಧರಿಸಲಾಯಿತು. ತಪಾಸಣೆಯ ಸಮಯದಲ್ಲಿ ಸಂಸ್ಥೆಗೆ ಸಂಬಂಧಿಸಿದ ಯಾರೂ ಇದ್ದಿರಲಿಲ್ಲ.

ಆ ಪ್ರದೇಶದಲ್ಲಿ ಬಲವಾದ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ದೂರು ನೀಡಿದ್ದರು. ಸಂಸ್ಥೆಯ ತ್ಯಾಜ್ಯವನ್ನು ಹತ್ತಿರದ ಹೊಳೆಗಳಿಗೆ ಬಿಡಲಾಗುತ್ತಿದ್ದು, ವಾಸನೆ ಅಸಹನೀಯವಾಗಿದೆ ಎಂದು ನಗರಸಭೆ ಕೌನ್ಸಿಲರ್ ಹೇಳಿರುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries