HEALTH TIPS

ಸಿಬ್ಬಂದಿ ನೇರ ನೇಮಕಾತಿ, ಬಡ್ತಿಗಾಗಿ ಮೀಸಲು ನೀತಿ ಜಾರಿಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಬಡ್ತಿ ಮತ್ತು ನೇರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕಲ್ಪಿಸುವ ನೀತಿ ಜಾರಿಗೊಳಿಸಿದೆ.

ಎಲ್ಲ ಸಿಬ್ಬಂದಿಗೆ ಜೂನ್‌ 24ರಂದು ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ರೋಸ್ಟರ್ ಮತ್ತು ರಿಜಿಸ್ಟರ್ ಕುರಿತು ಆಕ್ಷೇಪಗಳಿದ್ದಲ್ಲಿ ನೇಮಕಾತಿ ವಿಭಾಗದ ರಿಜಿಸ್ಟ್ರಾರ್‌ ಅವರಿಗೆ ಸಲ್ಲಿಸಲು ಸೂಚಿಸಿದೆ.

ಸುತ್ತೋಲೆ ಪ್ರಕಾರ, ನೇಮಕಾತಿ ಮತ್ತು ಬಡ್ತಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಶೇಕಡ 15ರಷ್ಟು, ಪರಿಶಿಷ್ಟ ಪಂಗಡಗಳಿಗೆ ಶೇ 7.5ರಷ್ಟು ಮೀಸಲಾತಿ ಲಭ್ಯವಾಗಲಿದೆ.

ರಿಜಿಸ್ಟ್ರಾರ್, ಹಿರಿಯ ಸಿಬ್ಬಂದಿ ಸಹಾಯಕರು, ಗ್ರಂಥಾಲಯ ಸಹಾಯಕರು, ಕೋರ್ಟ್‌ನ ಕಿರಿಯ ಸಹಾಯಕರು, ಗುಮಾಸ್ತ ಹುದ್ದೆಗಳಿಗೆ ಈ ಮೀಸಲಾತಿ ನೀತಿ ಅನ್ವಯವಾಗಲಿದೆ.

'ಸಕ್ಷಮ ಪ್ರಾಧಿಕಾರದ ನಿರ್ದೇಶನದ ಅನುಸಾರ, ಸುಪ್ರೀಂ ಕೋರ್ಟ್‌ನಲ್ಲಿ ಮಾದರಿ ಮೀಸಲು ರೋಸ್ಟರ್‌ ಮತ್ತು ರಿಜಿಸ್ಟರ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದು, 2025ರ ಜೂನ್‌ 23ರಿಂದಲೇ ಅನ್ವಯವಾಗುವಂತೆ ಜಾರಿಗೆ ಬಂದಿದೆ' ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries