HEALTH TIPS

BJP ಜೊತೆ ಮೈತ್ರಿ ನಿರಾಕರಿಸಿದ BSP ನಾಯಕಿ ಮಾಯಾವತಿ

ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಬಿಜೆಪಿ ಜೊತೆ ಮೈತ್ರಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಮಾತಾನಾಡಿರುವ ಮಾಯಾವತಿ,ಬಿಜೆಪಿ ನೇತೃತ್ವದ 'ಎನ್‌ಡಿಎ ಮೈತ್ರಿಕೂಟದಲ್ಲಾಗಲಿ, ಕಾಂಗ್ರೆಸ್ ನೇತೃತ್ವದ ಬಣದಲ್ಲಿ ಅಥವಾ ಯಾವುದೇ ಇತರ ರಂಗದಲ್ಲಾಗಲಿ ತಮ್ಮ ಪಕ್ಷ ಗುರುತಿಸಿಕೊಳ್ಳುವುದಿಲ್ಲ' ಎಂದು ಬಹುಜನ ಸಮಾಜ ಪಕ್ಷದ (BSP) ನಾಯಕಿ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.

ಬಿಎಸ್‌ಪಿಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಅವರು, 'ಸರ್ವಜನ ಹಿತಾಯ, ಸರ್ವಜನ ಸುಖಾಯ (ಎಲ್ಲರ ಹಿತ, ಎಲ್ಲರ ಸಂತೋಷ) ಎಂಬ ಅಂಬೇಡ್ಕರ್ ಸಿದ್ಧಾಂತಕ್ಕೆ ನಾನು ಬದ್ಧಳು' ಎಂದಿದ್ದಾರೆ.

ದಲಿತರು, ಬುಡಕಟ್ಟು ಜನಾಂಗದವರು ಮತ್ತು ಒಬಿಸಿಗಳನ್ನು ಗುರಿಯಾಗಿಸಿಕೊಂಡು ಜಾತಿವಾದಿ ಮನಸ್ಥಿತಿಗಳು" ಬಿಎಸ್ಪಿಗೆ ರಾಜಕೀಯವಾಗಿ ಹಾನಿ ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಅಭಿಯಾನ"ವನ್ನು ನಡೆಸುತ್ತಿದ್ದಾರೆ. ಈ ಸುಳ್ಳು ಸುದ್ದಿಗಳ ಬಗ್ಗೆ ಬಿಎಸ್ಪಿ ಕಾರ್ಯಕರ್ತರು ಎಚ್ಚರದಿಂದ ಇರಬೇಕು ಎಂದರು.

ಬಿಜೆಪಿ ಜೊತೆ ಮೈತ್ರಿಯಾಗಿಲ್ಲ ಎಂದು ಮಾಯಾವತಿ ತಮ್ಮ X ಖಾತೆ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries