HEALTH TIPS

ಭೂವಿವಾದ ಪ್ರಕರಣ: ಕೇಂದ್ರ ಸಚಿವ ಕೀರ್ತಿವರ್ಧನ್ ಸಿಂಗ್‌ ವಿರುದ್ಧ FIRಗೆ ಸೂಚನೆ

 ಗೊಂಡಾ: ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್‌, ಅವರ ಪ್ರತಿನಿಧಿ ರಾಜೇಶ್‌ ಸಿಂಗ್‌ ಮತ್ತು ಇತರೆ ಮೂವರು ಆರೋಪಿಗಳ ವಿರುದ್ಧ ಭೂವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿಕೊಳ್ಳುವಂತೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನ್ಯಾಯಾಲಯ ಪೊಲೀಸರಿಗೆ ನಿರ್ದೇಶಿಸಿದೆ.

ಇಲ್ಲಿನ ಸಂಸದರು, ಶಾಸಕರ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಅಪೇಕ್ಷಾ ಸಿಂಗ್‌ ಅವರು, ಕೀರ್ತಿವರ್ಧನ್‌ ಸಿಂಗ್‌, ರಾಜೇಶ್‌ ಸಿಂಗ್‌, ಪಿಂಕು ಸಿಂಗ್‌, ಸಹದೇವ್ ಯಾದವ್‌ ಮತ್ತು ಕಾಂತಿ ಸಿಂಗ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಮನ್ಕಾಪುರ ಠಾಣಾಧಿಕಾರಿಗೆ ಸೂಚಿಸಿದ್ದಾರೆ.

ಕೀರ್ತಿವರ್ಧನ್‌ ಸಿಂಗ್‌ ವಿರುದ್ಧ ಮನ್ಕಾಪುರ ಬಿಟೊರಾದ ನಿವಾಸಿ ಅಜಯ್‌ ಸಿಂಗ್‌ ಎಂಬುವರು ದೂರು ನೀಡಿದ್ದರು. ತಮ್ಮ ಪತ್ನಿ ಹೆಸರಿನಲ್ಲಿ ನೋಂದಣಿ ಆಗಿದ್ದ ಜಮೀನನ್ನು ಆರೋಪಿಗಳು ಅಕ್ರಮವಾಗಿ ಇನ್ನೊಬ್ಬರು ಹೆಸರಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಆರೋಪಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries