HEALTH TIPS

ಸೇನೆಯಲ್ಲಿ ಮೀಸಲಾತಿ | ಅರಾಜಕತೆ ಸೃಷ್ಟಿಗೆ ರಾಹುಲ್‌ ಯತ್ನ: ರಾಜನಾಥ ಸಿಂಗ್‌ ಆರೋಪ

ಮುಯಿ: 'ಸೇನಾ ಪಡೆಗಳಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸುವ ಮೂಲಕ ರಾಹುಲ್ ಗಾಂಧಿ ಅವರು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ' ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಬುಧವಾರ ಆರೋಪಿಸಿದರು.

ಬಿಹಾರದಲ್ಲಿ ಅವರು ಜಮುಯಿ ಮತ್ತು ಬಂಕ ಪ್ರದೇಶಗಳಲ್ಲಿ ಪ್ರಚಾರ ಸಭೆ ನಡೆಸಿದರು.

'ರಾಹುಲ್‌ ಗಾಂಧಿ ಅವರಿಗೆ ಏನಾಗಿದೆ? ರಕ್ಷಣಾ ಪಡೆಗಳಲ್ಲಿ ಮೀಸಲಾತಿ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಅವರು ಯತ್ನಿಸುತ್ತಿದ್ದಾರೆ. ನಮ್ಮ ಸೇನೆ ಈ ಎಲ್ಲದಕ್ಕಿಂತ ಮೇಲಿದೆ. ದೇಶ ನಡೆಸುವುದು ಎಂದರೆ ಮಕ್ಕಳ ಆಟವಲ್ಲ ಎಂಬುದನ್ನು ರಾಹುಲ್‌ ಅರಿಯಬೇಕು' ಎಂದರು.

ಬಿಹಾರದಲ್ಲಿ ಪ್ರಚಾರ ನಡೆಸುವ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಕೆರೆಗೆ ಹಾರಿ, ಮೀನುಗಾರಿಕೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಕೆರೆಗೆ ಹಾರುವುದು ಬಿಟ್ಟು ಅವರಿಗೆ ಬೇರೆ ಯಾವ ಆಯ್ಕೆ ಉಳಿದಿದೆ' ಎಂದರು.

'ಜಾತಿ, ಧರ್ಮದ ಆಧಾರದಲ್ಲಿ ಎನ್‌ಡಿಎ ಯಾವತ್ತಿಗೂ ತಾರತಮ್ಯ ಮಾಡುವುದಿಲ್ಲ. ರಾಜ್ಯದಲ್ಲಿ ಎನ್‌ಡಿಎ ಮೈತ್ರಿಯು ಕೇವಲ 'ವಿಕಸಿತ' ಬಿಹಾರಕ್ಕಾಗಿ ಮಾತ್ರ ಕೆಲಸ ಮಾಡಲಿದೆ' ಎಂದರು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries