ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಬಿಜೆಪಿ ಅಭ್ಯರ್ಥಿಗಳಾದ ಸರೋಜಿನಿ ಮಾನ್ಯ(ವಾರ್ಡು 15), ಅಶ್ವಿನಿ ಮೊಳೆಯಾರು(ವಾರ್ಡು 13), ಪುನೀತ್ ಮಾನ್ಯ(ವಾರ್ಡು 17) ಹಾಗೂ ನೀರ್ಚಾಲು ಬ್ಲಾಕ್ ಅಭ್ಯರ್ಥಿ ಮಹೇಶ್ ವಳಕುಂಜ ಮೊದಲಾದವರು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರ ಅನುಗ್ರಹ ಮಂತ್ರಾಕ್ಷತೆ ಪಡೆದರು. ಹಿರಿಯ ನ್ಯಾಯವಾದಿ ವಕೀಲ ಎಂ. ನಾರಾಯಣ ಭಟ್, ಪ್ರಮುಖರಾದ ಸಂತೋಷ್ ಕುಮಾರ್ ಮಾನ್ಯ, ಗಣೇಶ್ ಕೃಷ್ಣ ಅಳಕ್ಕೆ ಮೊದಲಾದವರು ಉಪಸ್ಥಿತರಿದ್ದರು.





