HEALTH TIPS

ಸಾಕು ನಾಯಿ ಹೊತ್ತೊಯ್ದ ಚಿರತೆ-ಸಿಸಿ ಟಿವಿ ದೃಶ್ಯಾವಳಿ ಪತ್ತೆ: ಆತಂಕದಲ್ಲಿ ಜನತೆ

ಕಾಸರಗೋಡು: ಮುಳಿಯಾರು ಪಂಚಾಯತಿ ಇರಿಯಣ್ಣಿಯ ಕುಣಿಯೇರಿಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು,  ಶನಿವಾರ ರಾತ್ರಿ ಎಂಟರ ವೇಳೆಗೆ ಕುಣಿಯೇರಿಯ ವೆಳ್ಳಾಟ್ ನಿವಾಸಿ ನಾರಾಯಣನ್ ಎಂಬವರ ಮನೆಯಂಗಳದಿಂದ ಅವರ ಸಾಕುನಾಯಿಯನ್ನು ಚಿರತೆ ಹೊತ್ತೊಯ್ಯುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ನಾಲ್ಕು ತಿಂಗಳು ಪ್ರಾಯದ, ಮನೆಯ ಸಾಕು ನಾಯಿ ನಾಪತ್ತೆಯಾಗಿದ್ದು, ಮನೆಯವರು ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ನಂತರ ಸಿಸಿಟಿವಿ ತಪಾಸಣೆ ನಡೆಸಿದಾಗ, ನಾಯಿಯನ್ನು ಚಿರತೆ ಕಚ್ಚಿ ಹೊತ್ತೊಯ್ಯವ ದೃಶ್ಯ ಲಭ್ಯವಾಗಿದೆ. 

ಈ ಪ್ರದೇಶದಲ್ಲಿ ತಿಂಗಳುಗಳ ಹಿಂದೆ ಚಿರತೆ ಸಂಚಾರ ಹೆಚ್ಚಾಗಿದ್ದು, ಇತ್ತೀಚೆಗೆ ಕೊಳತ್ತೂರಿನಿಂದ ಎರಡು ಚಿರತೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೋನಿನ ಮೂಲಕ ಸೆರೆ ಹಿಡಿದಿದ್ದರು.  ಕಾಡಿಗೆ ಹೊಂದಿಕೊಂಡಿರುವ ಜನವಾಸ ಪ್ರದೇಶ ಇದಾಗಿದ್ದು, ಚಿರತೆ ಸಂಚಾರದಿಂದ ಇಲ್ಲಿನ ಜನತೆ ಆತಂಕಕ್ಕೀಡಾಗಿದ್ದಾರೆ. ಈಪ್ರದೇಶಕ್ಕೆ  ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹುಡುಕಾಟ ನಡೆಸಿದ್ದಾರೆ.






 


 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries