HEALTH TIPS

ಕೆಎಸ್‍ಪಿಎಸ್ ಬದಿಯಡ್ಕ ಘಟಕದಿಂದ ಪೆನ್ಶನರ್ಸ್ ದಿನಾಚರಣೆ

ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಬದಿಯಡ್ಕ ಘಟಕದ ವತಿಯಿಂದ ಪೆನ್ಶನರ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯ ಸದಸ್ಯ ಶ್ಯಾಮ ಭಟ್ ಕುತ್ತಗುಡ್ಡೆ ಅವರನ್ನು ಅವರ ಮನೆಯಲ್ಲಿ ಶಾಲು ಹೊದೆಸಿ, ಹಣ್ಣುಹಂಪಲುಗಳನ್ನು ನೀಡಿ ಗೌರವಿಸಲಾಯಿತು. 

ಘಟಕದ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಟ್ ಕಡಾರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಮೈರ್ಕಳ ನಾರಾಯಣ ಭಟ್ ಅಭಿನಂದನಾ ನುಡಿಗಳನ್ನಾಡಿ, ಪೆನ್ಶನರ್ಸ್ ದಿನಾಚರಣೆಯ ಕುರಿತು ಮಾತನಾಡಿದರು. ಕಾರ್ಯದರ್ಶಿ ವೆಂಕಟ್ರಾಜ ಚಾಳೆತ್ತಡ್ಕ, ಉದನೇಶ ವೀರ ಕಿಳಿಂಗಾರು, ಹರೀಶ ಇಕ್ಕೇರಿ, ನವೀನಚಂದ್ರ ಮಾನ್ಯ ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries