ಕಾಸರಗೋಡು: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮಹಿಳಾ ಆಯೋಗವು ಯೋಜನೆಗಳನ್ನು ರೂಪಿಸಲಿದೆ ಎಂದು ಕೇರಳ ಮಹಿಳಾ ಆಯೋಗದ ಸದಸ್ಯೆ ಅಡ್ವ. ಪಿ. ಕುಂಜೈಷಾ ಅವರು ಹೇಳಿರುವರು.
ಕಾಸರಗೋಡು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅದಾಲತ್ನಲ್ಲಿ ದೂರನ್ನು ಆಲಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಸಮಸ್ಯೆಗಳನ್ನು ಅಧ್ಯಯನ ಮಾಡಲು ಮತ್ತು ಸಲಹೆಗಳನ್ನು ಸಲ್ಲಿಸಲು ಜನವರಿಯಿಂದ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುವುದು ಎಂದು ಅಡ್ವ. ಪಿ. ಕುಂಜೈಷಾ ಹೇಳಿದರು.
ಮಹಿಳೆಯರ ಮೇಲಿನ ಒಳನುಗ್ಗುವಿಕೆ ಮತ್ತು ಹಿಂಸೆಯನ್ನು ತಡೆಗಟ್ಟಲು ಪ್ರಯಾಣದ ಸಮಯದಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪಿ. ಕುಂಜೈಷಾ ಹೇಳಿದರು. ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಧೈರ್ಯದಿಂದ ಮಧ್ಯಪ್ರವೇಶಿಸುವುದನ್ನು ತಡೆಯುವುದು, ಸಮಾನತೆಯನ್ನು ತಡೆಯುವುದು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅವರು ಭಾಗವಹಿಸುವುದನ್ನು ತಡೆಯುವ ಉದ್ದೇಶದಿಂದ, ಅರಾಜಕ ಶಕ್ತಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮಹಿಳೆಯರನ್ನು ಅಪರಾಧಿಗಳಾಗಿ ಬಿಂಬಿಸುತ್ತಿವೆ. ತಾಂತ್ರಿಕ ವಿಷಯಗಳಲ್ಲಿನ ಲೋಪದೋಷಗಳಿಂದಾಗಿ ಇಂತಹ ಕಾನೂನು ಅಪರಾಧಗಳನ್ನು ಮಾಡುವವರು ಅದರಿಂದ ತಪ್ಪಿಸಿಕೊಳ್ಳುತ್ತಾರೆ. ಅಂತಹ ಪ್ರವೃತ್ತಿಗಳನ್ನು ವಿರೋಧಿಸಬೇಕು ಎಂದು ಅವರು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳ ಮಿತಿಗಳು ಸೇರಿದಂತೆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಪಿ. ಕುಂಜೈಷಾ ಹೇಳಿದರು.
ಮಹಿಳಾ ಆಯೋಗದ ಸದಸ್ಯೆ ಅದಾಲತ್ನಲ್ಲಿ ಆರ್ಥಿಕ ಸಮಸ್ಯೆಗಳು, ವಿವಾಹ ಭರವಸೆಗಳ ಮೂಲಕ ಶೋಷಣೆ ಮತ್ತು ವಿವಾಹೇತರ ಸಂಬಂಧಗಳಿಂದಾಗಿ ಉಂಟಾದ ವಿವಾದಗಳು ಮುಂತಾದ ವಿಷಯಗಳ ಕುರಿತು 37 ದೂರುಗಳನ್ನು ಆಲಿಸಿದರು. ಈ ಪೈಕಿ ಏಳು ದೂರುಗಳನ್ನು ಪರಿಹರಿಸಲಾಗಿದೆ. ಐದು ದೂರುಗಳಲ್ಲಿ ಪೆÇಲೀಸರಿಂದ ವರದಿ ಮತ್ತು ಮೂರು ದೂರುಗಳಲ್ಲಿ ಜಾಗೃತ ಸಮಿತಿಯಿಂದ ವರದಿ ಕೋರಲಾಗಿದೆ. ಒಂದು ಪ್ರಕರಣವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಯಿತು. ಅದಾಲತ್ನಲ್ಲಿ ಒಂದು ಹೊಸ ದೂರನ್ನು ಸಹ ಸ್ವೀಕರಿಸಲಾಗಿದೆ. 21 ದೂರುಗಳನ್ನು ಮುಂದಿನ ಸಭೆಗೆ ಮುಂದೂಡಲಾಗಿದೆ. ವಕೀಲೆ ಎಂ ಇಂದಿರಾವತಿ, ಜಿಲ್ಲಾ ಅಪರಾಧ ವಿಭಾಗದ ಉಪ ಅಧೀಕ್ಷಕಿ ಉತ್ತಮದಾಸ್, ಕಾಸರಗೋಡು ಮಹಿಳಾ ಕೋಶದ ಸಬ್-ಇನ್ಸ್ಪೆಕ್ಟರ್ ಎಂ ವಿ ಶರಣ್ಯ, ಸಹಾಯಕ ಸಬ್-ಇನ್ಸ್ಪೆಕ್ಟರ್ ಕೆ ವಿ ಚಂದ್ರಿಕಾ ಉಪಸ್ಥಿತರಿದ್ದರು.

.jpg)
.jpg)
