ಇರಾನ್ನ ಮೇಲೆ ಉದ್ದೇಶಪೂರ್ವಕ ಹೇರಿರುವ ಯುದ್ದವಾಗಿದೆ' ಎಂದು ಹೇಳಿದ್ದಾರೆ.
ಇರಾನ್ನ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯನ್ನು ಭಾರತ ಖಂಡಿಸದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ` ಇಂತಹ ವಿಷಯಗಳಲ್ಲಿ ಏಶ್ಯಾದ ಸ್ವತಂತ್ರ ಪ್ರಭಾವಿ ರಾಷ್ಟ್ರಕ್ಕೆ ಪ್ರಮುಖ ಪಾತ್ರವಿದೆ. ಭಾರತ ತನ್ನ ವಿದೇಶಾಂಗ ಕಾರ್ಯನೀತಿಯ ದಿಕ್ಸೂಚಿಯಾಗಿ ಕಾರ್ಯತಂತ್ರದ ಸ್ವಾಯತ್ತತೆಯನ್ನು ಸ್ಥಿರವಾಗಿ ವ್ಯಾಖ್ಯಾನಿಸಿದೆ. ಪ್ರಮುಖ ಶಕ್ತಿಗಳೊಂದಿಗೆ ಸಮತೋಲಿತ ಸಂಬಂಧವನ್ನು ನಿರ್ವಹಿಸುತ್ತದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಮತ್ತು ಜಾಗತಿಕ ದಕ್ಷಿಣದ ಪ್ರಮುಖ ಧ್ವನಿಯಾಗಿ, ಭಾರತವು ಮೌನವಾಗಿರದೆ, ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಸಕ್ರಿಯ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇರಾನ್ ಮತ್ತು ಭಾರತ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಎರಡು ಪ್ರಾಚೀನ ನಾಗರಿಕತೆಗಳಾಗಿವೆ. ಈ ಪರಂಪರೆಯು ಸೂಕ್ಷ್ಮ ಮತ್ತು ಪರಿವರ್ತನೆಯ ಕ್ಷಣಗಳಲ್ಲಿ ಜವಾಬ್ದಾರಿಯುತ ಸಹಕಾರಕ್ಕೆ ಅರ್ಥಪೂರ್ಣ ಅಡಿಪಾಯವನ್ನು ಒದಗಿಸುತ್ತದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.

