HEALTH TIPS

ಅಬಕಾರಿ ಹಗರಣ: ಕೇಜ್ರಿವಾಲ್, ಸಿಸೋಡಿಯಾ, ದುರ್ಗೇಶ್ ಪಾಠಕ್ ಪರ ಮೂವರು ಹಿರಿಯ ವಕೀಲರನ್ನು ನೇಮಿಸಲು ಹೈಕೋರ್ಟ್ ನಿರ್ಧಾರ

 ನವದೆಹಲಿ: ದೆಹಲಿ ಹೈಕೋರ್ಟ್ ಮಾಜಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ಮತ್ತು ಮನೀಷ್ ಸಿಸೋಡಿಯಾಗೆ ಹಿರಿಯ ವಕೀಲರನ್ನು 'ಅಮಿಕಸ್' (ನ್ಯಾಯಾಲಯದ ಸ್ನೇಹಿತ) ಎಂದು ನೇಮಿಸಲಿದೆ. ದೆಹಲಿ ಹೈಕೋರ್ಟ್ ಮಂಗಳವಾರ ಈ ಮೂವರು ನಾಯಕರನ್ನು ಪ್ರತಿನಿಧಿಸಲು ಮೂವರು ಹಿರಿಯ ವಕೀಲರನ್ನು 'ಅಮಿಕಸ್ ಕ್ಯೂರಿ' ಆಗಿ ನೇಮಿಸುವುದಾಗಿ ಘೋಷಿಸಿದೆ. ಮದ್ಯ ನೀತಿ ಪ್ರಕರಣ ಸಂಬಂಧ ನಡೆಯುತ್ತಿರುವ ವಿಚಾರಣೆಯನ್ನು ನಾಯಕರು ಬಹಿಷ್ಕರಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.


ಆರೋಪಿಗಳ ಖುಲಾಸೆಯನ್ನು ಪ್ರಶ್ನಿಸಿ ಕೇಂದ್ರ ತನಿಖಾ ದಳ (ಅಃI) ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ಪೀಠವು ನಾಯಕರನ್ನು ಪ್ರತಿನಿಧಿಸುವುದನ್ನು ಖಚಿತಪಡಿಸಿಕೊಳ್ಳಲು ಮಧ್ಯಪ್ರವೇಶಿಸುವುದಾಗಿ ಸೂಚಿಸಿತು. ಅಮಿಕಸ್ ಕ್ಯೂರಿ ಒಬ್ಬ ಅನುಭವಿ ವಕೀಲರಾಗಿದ್ದು, ಅವರು ಪ್ರಕರಣದ ಪಕ್ಷವಲ್ಲದಿದ್ದರೂ ಕಾನೂನು ವಾದಗಳಲ್ಲಿ ಸಹಾಯ ಮಾಡಲು, ಸಮಸ್ಯೆಗಳನ್ನು ಸ್ಪಷ್ಟಪಡಿಸಲು ಅಥವಾ ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯದಿಂದ ನೇಮಿಸಲಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries