ತಿರುವನಂತಪುರಂ: ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಟ್ಸ್ಪಾಟ್ಗಳನ್ನು ಗುರುತಿಸುವುದು ಸೇರಿದಂತೆ ಬೀದಿ ನಾಯಿ ನಿಯಂತ್ರಣಕ್ಕಾಗಿ ಸರ್ಕಾರ ಹೊಸ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಅಂಗವಿಕಲ ಅಥವಾ ಅನಾರೋಗ್ಯ ಪೀಡಿತ ನಾಯಿಗಳನ್ನು ಬೀದಿಗಳಲ್ಲಿ ಬಿಟ್ಟರೆ ದಂಡ ವಿಧಿಸುವುದು ಸೇರಿದಂತೆ ಕಟ್ಟುನಿಟ್ಟಿನ ನಿಬಂಧನೆಗಳನ್ನು ಜಾರಿಗೆ ತರಲಾಗುವುದು.
ಸಾಕು ನಾಯಿಗಳಿಗೆ ಪರವಾನಗಿ ನೀಡುವುದನ್ನು ಖಚಿತಪಡಿಸಿಕೊಳ್ಳುವುದು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕಡ್ಡಾಯವಾಗಿರುತ್ತದೆ. ಸಾಕು ನಾಯಿ ಕೇಂದ್ರಗಳಲ್ಲಿ ನಾಯಿಗಳ ಸಂತಾನೋತ್ಪತ್ತಿ, ಮಾರಾಟ ಮತ್ತು ಲಸಿಕೆ ಹಾಕಲು ಹೊಸ ನಿಬಂಧನೆಗಳನ್ನು ಸಹ ಮಾಡಲಾಗುವುದು. ಯೋಜನೆಗಳಿಗೆ ಸ್ಥಳೀಯಾಡಳಿತ ಸಂಸ್ಥೆಗಳು ಹಣವನ್ನು ಹಂಚಿಕೆ ಮಾಡಬೇಕಾಗುತ್ತದೆ.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಹಾಟ್ಸ್ಪಾಟ್ಗಳನ್ನು ಗುರುತಿಸಲಾಗುವುದು ಮತ್ತು ದಯಾಮರಣ ಸೇರಿದಂತೆ ನಿಯಂತ್ರಣಗಳನ್ನು ಜಾರಿಗೆ ತರಲಾಗುವುದು. ಕ್ರಿಯಾ ಯೋಜನೆಯನ್ನು ಐದು ಹಂತಗಳಾಗಿ ವಿಂಗಡಿಸಲಾಗಿದೆ: ಸಾಕು ನಾಯಿಗಳು, ಬೀದಿ ನಾಯಿಗಳು, ಬೀದಿ ನಾಯಿ ನಿಯಂತ್ರಣಕ್ಕೆ ಹಿನ್ನೆಲೆ ಸೃಷ್ಟಿಸುವುದು, ಸಾರ್ವಜನಿಕ ವಿಧಾನ ಮತ್ತು ಅಪಾಯದ ಸಮಯದಲ್ಲಿ ತಡೆಗಟ್ಟುವಿಕೆ.
ಈ ಉದ್ದೇಶಕ್ಕಾಗಿ ಸಚಿವ ಕೆ.ಎಂ. ಶಾಜಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಹೆಚ್ಚಿನ ಎಬಿಸಿ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆಯೂ ಪರಿಗಣನೆಯಲ್ಲಿದೆ. ಕೇಂದ್ರಗಳನ್ನು ಸ್ಥಾಪಿಸಲು ಕಡಿಮೆ ಜನನಿಬಿಡ ಪ್ರದೇಶವನ್ನು ಕಂಡುಹಿಡಿಯಬೇಕು. ಇದಕ್ಕಾಗಿ,Éನ್.ಜಿ.ಒಗಳು ಮತ್ತು ಇತರ ಸ್ವಯಂಸೇವಾ ಸಂಸ್ಥೆಗಳ ಸಹಾಯವನ್ನು ಪಡೆಯಲಾಗುವುದು.
ವಿಶೇಷ ಕೇಂದ್ರಗಳಲ್ಲಿ (ಆಶ್ರಯಗಳು) ಆಹಾರ ನೀಡುವ ಸ್ಥಳ ಮತ್ತು ಸಮಯವನ್ನು ನಿಗದಿಪಡಿಸುವುದು ಮತ್ತು ಮನೆಗಳಲ್ಲಿಯೂ ಸೇರಿದಂತೆ ನಾಯಿಗಳನ್ನು ಸಾಕುವುದು ಮಾರ್ಗಸೂಚಿಗಳಲ್ಲಿ ಸೇರಿರುತ್ತದೆ. ಂಃಅ. ಕೇಂದ್ರಗಳಿಗೆ ನಾಯಿಗಳನ್ನು ಸಾಗಿಸಲು ನಾಯಿ ಹಿಡಿಯುವವರನ್ನು ನಿಯೋಜಿಸುವ ಬಗ್ಗೆಯೂ ಪರಿಗಣಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಅನುಮತಿಸಿದ ದಯಾಮರಣವನ್ನು ಅಂತಿಮ ಹಂತದಲ್ಲಿ ಪರಿಗಣಿಸಲಾಗುವುದು.

