HEALTH TIPS

S I R ನಲ್ಲಿ ಹೆಸರು ಅಳಿಸಿದ ಬಳಿಕ ಸುದೀರ್ಘ ಪರಿಶೀಲನೆ: ಕೊನೆಗೂ 'ದಿ ಟೆಲಿಗ್ರಾಫ್‌' ಮಾಜಿ ಸಂಪಾದಕ ಆರ್‌. ರಾಜಗೋಪಾಲ್‌ ಕೈ ಸೇರಿದ ನವೀಕೃತ ಪಾಸ್‌ಪೋರ್ಟ್‌

ಕೋಲ್ಕತ್ತ,: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ತಮ್ಮ ಹೆಸರು ಅಳಿಸಲ್ಪಟ್ಟ ಕಾರಣ ಪಾಸ್‌ಪೋರ್ಟ್‌ ನವೀಕರಣ ಪ್ರಕ್ರಿಯೆ ವಿಳಂಬವಾಗಿದ್ದ ದಿ ಟೆಲಿಗ್ರಾಫ್‌ನ ಮಾಜಿ ಸಂಪಾದಕ ಆರ್‌. ರಾಜಗೋಪಾಲ್‌ ಅವರಿಗೆ ಶನಿವಾರ ನವೀಕರಿಸಿದ ಪಾಸ್‌ಪೋರ್ಟ್‌ ದೊರೆತಿದೆ.

2016ರಿಂದ 2023ರವರೆಗೆ ದಿ ಟೆಲಿಗ್ರಾಫ್‌ನ ಸಂಪಾದಕರಾಗಿದ್ದ ರಾಜಗೋಪಾಲ್‌, ಫೆಬ್ರುವರಿಯಲ್ಲಿ ಪಾಸ್‌ಪೋರ್ಟ್‌ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಮಾರ್ಚ್‌ನಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು.

ಜೂನ್‌ 27ರಂದು ಅಧಿಕಾರಿಗಳು, 2002ರ ಮತದಾರರ ಪಟ್ಟಿಯಲ್ಲಿ ರಾಜಗೋಪಾಲ್‌ ಅಥವಾ ಅವರ ತಂದೆಯ ಹೆಸರಿನ ದಾಖಲೆ ಪತ್ತೆಯಾಗದ ಕಾರಣ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದರು.

ತಮ್ಮ ಹೆಸರನ್ನು "ತಾರ್ಕಿಕ ವ್ಯತ್ಯಾಸಗಳು" ಎಂಬ ಕಾರಣ ನೀಡಿ ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ ಎಂದು ರಾಜಗೋಪಾಲ್‌ ಹೇಳಿದ್ದಾರೆ. ಪೋಷಕರ ಹೆಸರಿನಲ್ಲಿನ ವ್ಯತ್ಯಾಸ, ಪೋಷಕರು ಮತ್ತು ಮಕ್ಕಳ ನಡುವಿನ ಕಡಿಮೆ ವಯೋಮಾನದ ಅಂತರ ಹಾಗೂ ಒಂದೇ ಕುಟುಂಬದಲ್ಲಿ ಆರು ಮಕ್ಕಳಿಗಿಂತ ಹೆಚ್ಚು ಮಕ್ಕಳ ಹೆಸರು ದಾಖಲಾಗಿರುವುದು ಮುಂತಾದ ಅಂಶಗಳನ್ನು ಇದರಲ್ಲಿ ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ, ನಂತರ ಯಾವುದೇ ಹಂತದಲ್ಲೂ ತಮ್ಮಿಂದ ಹೆಚ್ಚುವರಿ ದಾಖಲೆಗಳನ್ನು ಕೇಳಲಿಲ್ಲ ಎಂದು ರಾಜಗೋಪಾಲ್‌ ಹೇಳಿದ್ದಾರೆ.

ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಸನ್‌ ಅವರು ಸೋಮವಾರ ಈ ಪ್ರಕರಣದ ಕುರಿತು ಪತ್ರ ಬರೆದಿದ್ದರು. ಅದೇ ದಿನ, ಕೊಲ್ಕತ್ತಾ ಪಾಸ್‌ಪೋರ್ಟ್‌ ಕಚೇರಿಯಿಂದ ಹೊಸ ಪೊಲೀಸ್‌ ಪರಿಶೀಲನೆಗೆ ಮನವಿ ಸಲ್ಲಿಸುವಂತೆ ಸೂಚಿಸಿ ಇಮೇಲ್‌ ಬಂದಿತ್ತು. ಕೆಲವೇ ಸಮಯದ ಬಳಿಕ ತಮ್ಮ ಪಾಸ್‌ಪೋರ್ಟ್‌ ಪ್ರಕ್ರಿಯೆ ಪೂರ್ಣಗೊಂಡಿರುವ ಕುರಿತು ಸಂದೇಶವೂ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.

ರಾಜಗೋಪಾಲ್‌ ಅವರ ಕುಟುಂಬ ಕೇರಳ ಮೂಲದವರಾಗಿದ್ದು, ಅವರು ತಿರುವನಂತಪುರದಲ್ಲಿ ಜನಿಸಿದ್ದರು. ಅವರ ತಂದೆ ಗಾಂಧಿ ಸ್ಮಾರಕ ನಿಧಿಯ ಕೇರಳ ಘಟಕದ ಮಾಜಿ ಕಾರ್ಯದರ್ಶಿಯಾಗಿದ್ದರು.

ಈ ಪ್ರಕರಣದಲ್ಲಿ ರಾಜಕೀಯ ಒತ್ತಡದಿಂದಾಗಿ ತಮ್ಮ ಅರ್ಜಿಯ ಪ್ರಕ್ರಿಯೆ ತ್ವರಿತಗೊಳಿಸಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿರುವ ರಾಜಗೋಪಾಲ್‌, ವಿಶೇಷ ತೀವ್ರ ಪರಿಷ್ಕರಣೆ ವೇಳೆ ಸಂಗ್ರಹಿಸಿದ ಮಾಹಿತಿಯನ್ನು ಬೇರೆ ಉದ್ದೇಶಗಳಿಗೆ ಬಳಸಬಹುದೇ ಎಂಬುದರ ಕುರಿತು ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಮಾಹಿತಿಯನ್ನು ಪೊಲೀಸರು ಬಳಸಲು ಅವಕಾಶ ನೀಡಿದರೆ, ಅದು ನಾಗರಿಕರಿಗೆ ಅಪಾಯಕಾರಿ ಪರಿಸ್ಥಿತಿ ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಈ ನಡುವೆ, ಮೇ 27ರಂದು ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಎತ್ತಿಹಿಡಿದಿತ್ತು. ಆದರೆ, ಮತದಾರರ ಪಟ್ಟಿಗೆ ಹೆಸರು ಸೇರಿಸುವ ಅಥವಾ ಕೈಬಿಡುವ ಪ್ರಕ್ರಿಯೆಯು ವ್ಯಕ್ತಿಯ ಪೌರತ್ವವನ್ನು ಅಂತಿಮವಾಗಿ ನಿರ್ಧರಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.

ಇದೇ ವೇಳೆ, ಪಾಸ್‌ಪೋರ್ಟ್‌ ಎನ್ನುವುದು ಪ್ರಯಾಣ ದಾಖಲೆಯಾಗಿದ್ದು, ಅದು ಪೌರತ್ವದ ಅಂತಿಮ ಪುರಾವೆಯಲ್ಲ ಎಂದು ವಿದೇಶಾಂಗ ಸಚಿವಾಲಯವು ಪುನರುಚ್ಚರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries