ತಿರುವನಂತಪುರಂ: ಕಾರ್ಮಿಕ ಇಲಾಖೆಯ ಹೆಚ್ಚುವರಿ ಕಾರ್ಮಿಕ ಆಯುಕ್ತ ಕೆ. ಶ್ರೀಲಾಲ್ ಅವರನ್ನು ಅಮಾನತುಗೊಳಿಸಲಾಗಿದೆ. ಕೇರಳದ ಸಮಗ್ರ ಆರೋಗ್ಯ ವಿಮಾ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಹಣಕಾಸಿನ ಅಕ್ರಮಗಳು ಕಂಡುಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಶ್ರೀಲಾಲ್ ಪ್ರಸ್ತುತ ಕೇರಳ ರೈತ ಕಲ್ಯಾಣ ನಿಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಗಂಭೀರ ಆರ್ಥಿಕ ಅಕ್ರಮಗಳು ಕಂಡುಬಂದಿವೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸಿಇಒ ಆಗಿದ್ದಾಗ ಅಧಿಕೃತ ಮೊಬೈಲ್ ಫೆÇೀನ್ಗಳನ್ನು ಖರೀದಿಸುವುದು ಮತ್ತು ಪ್ರಯಾಣ ಭತ್ಯೆ ಮತ್ತು ವೆಚ್ಚಗಳನ್ನು ಅಕ್ರಮವಾಗಿ ಪಡೆದ ಬಗ್ಗೆ ದೂರುಗಳು ಬಂದಿವೆ. ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ಆಯುಕ್ತರ ನಂತರದ ಶ್ರೇಣಿಯೆಂದರೆ ಹೆಚ್ಚುವರಿ ಕಾರ್ಮಿಕ ಆಯುಕ್ತರು.

