ಉಪ್ಪಳ: ವಾತ್ಸಲ್ಯದ ಕರಸ್ಪರ್ಶವಾಗಿ ವೈದ್ಯಕೀಯ ಶಿಬಿರವನ್ನು ವಿಶೇಷ ಚೇತನ ಮಕ್ಕಳಿಗೆ ಸಹಾಯಕ ಸಾಧನಗಳನ್ನು ಖಾತರಿಪಡಿಸಲು ಮಂಜೇಶ್ವರ ಬಿ.ಆರ್.ಸಿ.ಯಲ್ಲಿ ವೈದ್ಯಕೀಯ ಮೌಲ್ಯಮಾಪನ ಶಿಬಿರವನ್ನು ಆಯೋಜಿಸಲಾಯಿತು.
ವಿಶೇಷ ಚೇತನ ಮಕ್ಕಳ ಇತಿಮಿತಿಗಳನ್ನು ಗುರುತಿಸಿ, ಅವರ ಜೀವನಕ್ಕೆ ಹೆಚ್ಚಿನ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುವ ಉದ್ದೇಶದಿಂದ ಮಂಜೇಶ್ವರ ಬಿ.ಆರ್.ಸಿ.ಯ ನೇತೃತ್ವದಲ್ಲಿ ವೈದ್ಯಕೀಯ ಮೌಲ್ಯಮಾಪನ ಶಿಬಿರವನ್ನು ಏರ್ಪಡಿಸಲಾಯಿತು. ಮಂಜೇಶ್ವರ ಬಿ.ಆರ್.ಸಿ. ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದಾಖಲಾಗಿರುವ ವಿಶೇಷ ಅಗತ್ಯವುಳ್ಳ ಮಕ್ಕಳ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಅಗತ್ಯವಿರುವ ಸಹಾಯಕ ಸಾಧನಗಳನ್ನು ಒದಗಿಸುವ ಸಲುವಾಗಿ ಮಕ್ಕಳನ್ನು ತಜ್ಞ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ಶಿಬಿರದ ಔಪಚಾರಿಕ ಉದ್ಘಾಟನೆಯನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ನೆರವೇರಿಸಿದರು. ಸಮಾರಂಭದಲ್ಲಿ ಸಮಗ್ರ ಶಿಕ್ಷಣ ಕಾಸರಗೋಡು ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಚೆರಿಷ್ಮಾ ಸಿ. ಅಧ್ಯಕ್ಷತೆ ವಹಿಸಿದ್ದರು. ಸಮಗ್ರ ಶಿಕ್ಷಣ ಕಾಸರಗೋಡು ಜಿಲ್ಲಾ ಯೋಜನಾ ಸಂಯೋಜಕ ಶೌಕತಲಿ ಅಕ್ಕಾಲತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮುಳಿಂಜ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಚಿತ್ರವತಿ ಚಿಗುರುಪಾದೆ ಶುಭಾಶಂಸನೆಗೈದರು. ಕಾಸರಗೋಡು ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಅರುಣ್ ರಾಮ್ ಶಿಬಿರಕ್ಕೆ ನೇತೃತ್ವ ನೀಡಿದರು. ಸುಮಾರು ಐವತ್ತು ಮಕ್ಕಳನ್ನು ಪರೀಕ್ಷಿಸಿ, ಅವರ ಅಗತ್ಯಗಳನ್ನು ಮೌಲ್ಯಮಾಪನ ಮಾಡಲಾಯಿತು. ಅಗತ್ಯವಿರುವ ಸಹಾಯಕ ಸಾಧನಗಳನ್ನು ಒದಗಿಸುವ ಸಲುವಾಗಿ ಮಕ್ಕಳನ್ನು ಸೂಕ್ತ ಕೇಂದ್ರಗಳಿಗೆ ಶಿಫಾರಸು ಮಾಡಲಾಯಿತು.
ವಿಶೇಷ ಶಿಕ್ಷಣ ಶಿಕ್ಷಕರಾದ ಬಿಂದ್ಯ ಎನ್., ರೀಮಾ ಮೊಂತೆರಿಯೋ, ಅನುಶ್ರೀ ಪಿ., ಸರಿತಾ ಕೆ., ಭವ್ಯ, ರಶ್ಮಿ ಹಾಗೂ ಪದ್ಮಸರೋಜ ಮೊದಲಾದವರು ಶಿಬಿರದ ವಿವಿಧ ಚಟುವಟಿಕೆಗಳಿಗೆ ನೇತೃತ್ವ ನೀಡಿದರು. ಮಂಜೇಶ್ವರ ಬಿ.ಪಿ.ಸಿ. ಪಿ. ರಾಜಗೋಪಾಲನ್ ಸ್ವಾಗತಿಸಿ, ವಿಶೇಷ ಶಿಕ್ಷಣ ಶಿಕ್ಷಕಿ ರೀಮಾ ಮೊಂತೆರಿಯೋ ವಂದಿಸಿದರು.

.jpg)
.jpg)
