HEALTH TIPS

No title

                    ಅದಮ್ಯಚೇತನ ಸೇವಾ ಉತ್ಸವ ಉದ್ಘಾಟಿಸಿದ ರಾಷ್ಟ್ರಪತಿ
              `ಪರಿಸರ ಸಂರಕ್ಷಣೆ ಈ ಹೊತ್ತಿನ ತುತರ್ು ಅಗತ್ಯ'
     ಬೆಂಗಳೂರು: `ಪ್ರಕೃತಿ ಎಲ್ಲರ ಆರಾಧ್ಯದೈವ. ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಆದ್ಯತೆ ನೀಡಬೇಕು. ಇದು  ಈ ಹೊತ್ತಿನ ತುತರ್ು ಅವಶ್ಯ' ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ತಿಳಿಸಿದರು.
         ಬೆಂಗಳೂರಿನಲ್ಲಿ ಶನಿವಾರ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಶತಮಾನೋತ್ಸವ ಹಾಗೂ ಅದಮ್ಯಚೇತನ ಸೇವಾಉತ್ಸವ ಉದ್ಘಾಟಿಸಿ ಅವರು ಮಾತನಾಡಿ, ಕನರ್ಾಟಕವು ಜ್ಞಾನ ಮತ್ತು ಸಂಸ್ಕೃತಿಯಲ್ಲಿ ಅತ್ಯಂತ ಶ್ರೀಮಂತ ರಾಜ್ಯ.  ಪರಸ್ಪರರನ್ನು ಗೌರಿಸುವ ಇಲ್ಲಿನ ಸಂಸ್ಕಾರ ಕೂಡ
ಅನುಕರಣೀಯ. ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಮತ್ತು ಅದಮ್ಯಚೇತನ ಪ್ರತಿಷ್ಠಾನ ಗಮನಾರ್ಹ ಕೆಲಸ ಮಾಡುತ್ತಿವೆ ಎಂದರು.
  `ಅನಿಬೆಸೆಂಟ್ ನೂರು ವರ್ಷಗಳ ಹಿಂದೆ ಸ್ಥಾಪಿಸಿದ ನ್ಯಾಷನಲ್ ಎಜುಕೇಷನ್ ಸೊಸೈಟಿ ಇಂದು ಶತಮಾನೋತ್ಸವದ ಸಂಭ್ರಮದಲ್ಲಿದೆ. ಈ ಸಂಸ್ಥೆ
ಇಂದು ನೂರಾರು ಶಾಲಾ ಕಾಲೇಜುಗಳನ್ನು ನಡೆಸುತ್ತಿದೆ. ಇದರಲ್ಲಿ ನ್ಯಾಷನಲ್ ಹೈಸ್ಕೂಲ್ ಕೂಡ ಒಂದು. ಇದನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವಲ್ಲಿ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಕೊಡುಗೆಯೂ ಅನನ್ಯ' ಎಂದು ಹೇಳಿದರು.
  `ಇಲ್ಲಿ ಶಿಕ್ಷಣ ಪಡೆದವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ್ದಾರೆ. ಇಸ್ರೊ ಅಧ್ಯಕ್ಷ ಡಾ.ಎ.ಎಸ್.ಕಿರಣ್ಕುಮಾರ್, ಸುಪ್ರೀಂಕೋಟರ್್ ನಿವೃತ್ತ ಮುಖ್ಯನ್ಯಾಯಮೂತರ್ಿ ಡಾ.ಎಂ.ಎನ್.ವೆಂಕಟಾಚಲಯ್ಯ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ, ಕ್ರಿಕೆಟಿಗ ಅನಿಲ್ ಕುಂಬ್ಳೆ, ಚಿತ್ರನಟ ವಿಷ್ಣುವರ್ಧನ್ ಕೂಡ ಈ ಶಾಲೆ ವಿದ್ಯಾಥರ್ಿಗಳಾಗಿದ್ದರು ಎನ್ನುವುದನ್ನು ಕೇಳಿದ್ದೇನೆ' ಎಂದರು.
   ಅನ್ನಪೂರ್ಣ ಯೋಜನೆಯಡಿ ನಿತ್ಯ 1 ಲಕ್ಷಕ್ಕೂ ಹೆಚ್ಚು ಬಡ ಮಕ್ಕಳಿಗೆ ಬಿಸಿಯೂಟ ನೀಡುವ ಅದಮ್ಯಚೇತನ ಪ್ರತಿಷ್ಠಾನದ ಕಾರ್ಯಕ್ರಮದ ಬಗ್ಗೆಯೂ ರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದರು.  ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, `ಪ್ರತಿಷ್ಠಾನ ಆರಂಭಿಸಲು ನನ್ನ ತಾಯಿ ಗಿರಿಜಾ ಶಾಸ್ತ್ರಿ ಅವರೇ ಮೂಲ ಪ್ರೇರಣೆ. ಅವರು 21 ವರ್ಷ ಕ್ಯಾನ್ಸರ್ ಜತೆಗೆ ಹೋರಾಡುತ್ತಲೇ, ಬಡಮಕ್ಕಳು ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದರು. ಪ್ರತಿಷ್ಠಾನವು `ಅನ್ನಪೂರ್ಣ' ಯೋಜನೆಯಡಿ ಈಗ 1.50 ಲಕ್ಷ ಮಕ್ಕಳಿಗೆ ಬಿಸಿಯೂಟ ಪೂರೈಸುತ್ತಿದೆ. ಡಾ.ಬಾಲಗಂಗಧಾರನಾಥ ಸ್ವಾಮೀಜಿ ಪ್ರೇರಣೆ ಕೊಟ್ಟಿ
ದ್ದರು. ಶ್ರೀಗಳು ನೀಡಿದ `ಅನ್ನ, ಅಕ್ಷರ, ಆರೋಗ್ಯ' ಘೋಷವಾಕ್ಯದಡಿಯೇ ಸಾಮಾಜಿಕ ಕೆಲಸ ಮುಂದುವರಿಸಿದ್ದೇವೆ' ಎಂದರು.
      ಗಮನ ಸೆಳೆದ ವಸ್ತು ಪ್ರದರ್ಶನ:
   ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ತಜ್ಞರ ಸಹಯೋಗದಲ್ಲಿ ಅದಮ್ಯಚೇತನ ಸಂಸ್ಥೆಯು ಪರಿಸರ ವಿಜ್ಞಾನ ತರಬೇತಿ ಆಯೋಜಿಸಿತ್ತು. ಎರಡು ತಿಂಗಳ ಕ್ಷೇತ್ರ ಕಾರ್ಯ ಒಳಗೊಂಡ ಈ ತರಬೇತಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾಥರ್ಿಗಳು ತಯಾರಿಸಿದ್ದ ವಿಜ್ಞಾನ ಮತ್ತು ಪರಿಸರ ಕುರಿತ ಮಾದರಿಗಳನ್ನು ಪ್ರದಶರ್ಿಸಲಾಯಿತು.
  ಶಾಲಾ ಮಕ್ಕಳು ರೂಪಿಸಿದ್ದ ಹಸಿರು ಜೀವನ ಶೈಲಿ ಪ್ರತಿಪಾದಿಸುವ ಮಾದರಿಗಳು, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ರಾಕೆಟ್ಗಳ ಮಾದರಿಗಳು, ವೈಮಾನಿಕ ಮತ್ತು ರಕ್ಷಣಾ ಉಪಕರಣಗಳು ಪ್ರದರ್ಶನದಲ್ಲಿ ಗಮನ ಸೆಳೆದವು. 150ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳಿದ್ದವು.
  ಯಕ್ಷಗಾನ, ಶಾಸ್ತ್ರೀಯ ನೃತ್ಯ, ವಚನ ಗಾಯನ, ಹಾಸ್ಯ ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರಿಗೆ ರಸದೌತಣ ನೀಡಿದವು.





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries