HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಛಲ ನಮ್ಮನ್ನು ಅತ್ಯುನ್ನತ ಸ್ಥಾನಕ್ಕೆ ಒಯ್ಯುತ್ತದೆ-ಸುಧೀರ್ ಕುಮಾರ್ ಶೆಟ್ಟಿ
   ಪೆರ್ಲ: ಕಲಿತ ವಿದ್ಯೆ ನಮ್ಮನ್ನು ಸಮಾಜದಲ್ಲಿ ಸೋಲದಂತೆ ಕಯ್ದುಕೊಳ್ಳುತ್ತದೆ. ನಮ್ಮಲ್ಲಿರುವ ಗುರಿ, ಬುದ್ಧಿಶಕ್ತಿ, ಸಾಧಿಸಬೇಕೆಂಬ ಛಲ ಅತ್ಯುನ್ನತ ಸ್ಥಾನಕ್ಕೆ ಒಯ್ಯುತ್ತದೆ ಎಂದು ಅಬುದಾಬಿ ಯು.ಎ.ಇ. ಮನಿ ಎಕ್ಸ್ಚೇಂಜ್ ಸಂಸ್ಥೆಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅಭಿಪ್ರಾಯಪಟ್ಟರು.
   ಅವರು ತಾನು ಕಲಿತ ಶಾಲೆಯಾದ ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲ್ನ ಹತ್ತನೇ ತರಗತಿ ವಿದ್ಯಾಥರ್ಿಗಳೊಂದಿಗೆ ಇತ್ತೀಚೆಗೆ ನಡೆಸಿದ ಎಸ್ಎಸ್ಎಲ್ಸಿ ನಂತರ ಮುಂದೇನು ಎಂಬ ವಿಷಯದ ವಿಶೇಷ  ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
   ಸಮಯ ನಿಷ್ಠೆ, ಪ್ರಾಮಾಣಿಕತೆ ಮಾನವೀಯ ಮೌಲ್ಯಗಳು ಮೈಗೂಡಿಸಿಕೊಂಡರೆ ಜೀವನದಲ್ಲಿ ಉನ್ನತಿಗೇರಲು ಸಾಧ್ಯ ಎಂದು ಅವರು ಈ ಸಂದರ್ಭ ಕಿವಿಮಾತು ಹೇಳಿದರು.
   ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಬಿ.ರಾಜೇಂದ್ರ, ಶಾಲಾ ಪ್ರಬಂಧಕ ಶ್ರೀಕೃಷ್ಣ ವಿಶ್ವಾಮಿತ್ರ, ಆಡಳಿತ ಮಂಡಳಿಯ ಸದಾಶಿವ ಭಟ್, ವೆಂಕಟ್ರಾಜ ಮಿತ್ರ, ಶಾಲಾ ನೌಕರ ಸಂಘದ ಕಾರ್ಯದಶರ್ಿ ಎನ್.ಕೇಶವ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries