HEALTH TIPS

No title

                     ಕರಾವಳಿ ಮೂಲದಿಂದ ಮತ್ತೊಂದು ಲವ್ ಜಿಹಾದ್ ಪ್ರಕರಣ ಬಯಲು
    ಕಾಸರಗೋಡು: ಕರಾವಳಿಯಲ್ಲಿ ಜೋರಾಗಿ ಕೇಳಿ ಬರುತ್ತಿರುವ ಲವ್ ಜಿಹಾದ್ ಪ್ರಕರಣಗಳ ಕೂಗಿಗೆ ಮತ್ತಷ್ಟು ಪುಷ್ಠಿಯೊದಗಿಸುವಂತೆ ಮತ್ತೊಂದು ಲವ್ ಜಿಹಾದ್ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಬಜರಂಗದಳ ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ದೂರು ನೀಡುವ ಮೂಲಕ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.
  ಕಾಸರಗೋಡಿನ ಪ್ರಭಾವಿ ಹಿಂದು ಮುಖಂಡರೊಬ್ಬರ ಪುತ್ರಿ ಎಂದು ಬಿಂಬಿಸಲ್ಪಡುತ್ತಿರುವ , ಮಂಗಳೂರಿನಲ್ಲಿ ಕಾನೂನು ಪದವಿ ವಿದ್ಯಾಥರ್ಿನಿ ನಾಪತ್ತೆಯಾಗಿದ್ದಾಳೆ. ಮುಂಬೈನ ಮನ್ ಖುದರ್್ ನಿವಾಸಿಯಾಗಿರುವ ಇಕ್ಬಾಲ್ ಚೌಧರಿ(28) ಎಂಬಾತ ಮುಂಬೈಗೆ ಕರೆದೊಯ್ದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
  ಯುವತಿಗೆ ಮೂರು ವರ್ಷದ ಹಿಂದೆ ಫೇಸ್ಬುಕ್ ಮೂಲಕ ಇಕ್ಬಾಲ್ ಪರಿಚಯವಾಗಿದ್ದ ಎಂದು ತಿಳಿದುಬಂದಿದೆ. ಐದು ತಿಂಗಳ ಹಿಂದೆ ವಿದ್ಯಾಥರ್ಿನಿ ನಾಪತ್ತೆಯಾಗಿದ್ದು, ಆಕೆಯನ್ನು ಪುಸಲಾಯಿಸಿ ಅಪಹರಣ ಮಾಡಲಾಗಿದೆ ಎಂದು ಹೆತ್ತವರು ದೂರು ನೀಡಿದ್ದಾರೆ.
  ಇದು ಲವ್ ಜಿಹಾದ್ ಪ್ರಕರಣವಾಗಿದ್ದು, ಕನರ್ಾಟಕ ಮತ್ತು ಕೇರಳದಲ್ಲಿನ ಇಂತಹ ಪ್ರಕರಣಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ತನಿಖೆ ನಡೆಸಬೇಕೆಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಬಜರಂಗದಳ ಮನವಿ ಮಾಡಿದೆ. ಲವ್ ಜಿಹಾದ್ಗೆ ಬಲಿಯಾಗಿರುವ ಪ್ರಕರಣಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
   ಹೆತ್ತವರು ಎಚ್ಚರಗೊಳ್ಳುವುದು ಯಾವಾಗ:
   ಕರಾವಳಿಯಾದ್ಯಂತ ತೀವ್ರಗೊಂಡಿರುವ ಲವ್ ಜಿಹಾದ್ ಆಗೊಮ್ಮೆ-ಈಗೊಮ್ಮೆ ಚಿಂತನೆಗೊಳಗಾಗುತ್ತವೆಯೇ ಹೊರತು ಮತ್ತೆ ಆ ಬಗ್ಗೆ ಗಂಭೀರತೆ ಕಳಕೊಳ್ಳುತ್ತಿರುವ ಬಗ್ಗೆ ಚಚರ್ೆ ನಡೆಸಬೇಕಿದೆ. ಹೆತ್ತವರು ದುಬಾರಿ ಹಣ ತೆತ್ತು ಮಗಳಂದಿರ ಓದಿಗೆಂದು ಎಲ್ಲವನ್ನೂ ಮರೆಯುತ್ತಿರುವುದರ ಮೀರಿದ ಮಿತಿ ಲವ್ ಜಿಹಾದ್ ನಂತಹ ಪ್ರಕರಣಗಳಿಗೆ ದಾರಿಯಾಗುತ್ತಿವೆ. ಒಟ್ಟು ಸಾಮಾಜಿಕ ವ್ಯವಸ್ಥೆಯ ಮೇಲೆ ತಲ್ಲಣಗಳಿಗೆ ಕಾರಣವಾಗುವ ಇಂತಹ ಗೊಂದಲಗಳಿಗೆ ಹೆಣ್ಮಕ್ಕಳ ಹೆತ್ತವರು ಮನುಷ್ಯರಂತೆ ಇನ್ನಾದರೂ ವತರ್ಿಸದಿದ್ದರೆ ತೀವ್ರ ಸ್ವರೂಪದ ಅಸಮತೋಲನ, ಅಸಂತುಷ್ಠಿಗಳಿಗೆ ದಾರಿ ಮಡಿಕೊಡುವ ಬಗ್ಗೆ ಸಮಷ್ಠಿಯಲ್ಲಿ ಚಿಂತಿಸುವ ಅಗತ್ಯ ಇದೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries