HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಮಂಡಲ ಕಾಂಗ್ರೆಸ್ಸ್ನಿಂದ ಧರಣಿ

     ಪೆರ್ಲ: ಕೇರಳ ರಾಜ್ಯ ಸರಕಾರದ ಆಥರ್ಿಕ ದುಸ್ಥಿತಿ,ಆಡಳಿತ ಪರಾಜಯ ಹಾಗೂ ಎಣ್ಮಕಜೆ ಗ್ರಾ.ಪಂ. ಯೋಜನಾ ನಿಧಿಯ ಕುಂಠಿತತೆಗೆದುರಾಗಿ ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿಯ ನಿದರ್ೇಶಾನುಸಾರ ಎಣ್ಮಕಜೆ ಮಂಡಲ ಕಾಂಗ್ರೆಸ್ಸ್ ಸಮಿತಿ ನೇತೃತ್ವದಲ್ಲಿ ಗುರುವಾರ ಎಣ್ಮಕಜೆ ಗ್ರಾ.ಪಂ. ಕಚೇರಿಯ ಮುಂದೆ ಧರಣಿ ನಡೆಸಲಾಯಿತು.
  ಪೆರ್ಲ ವಿದ್ಯುತ್ ವಿಭಾಗೀಯ ವ್ಯಾಪ್ತಿಯ ಉಚಿತ ಕೃಷಿ ವಿದ್ಯುತ್ ಬಳಕೆದಾರರಿಗೆ ವಿದ್ಯುತ್ ಬಿಲ್ ನೀಡಿರುವುದನ್ನು ಧರಣಿಯಲ್ಲಿ ಟೀಕಿಸಲಾಯಿತು. ಜೊತೆಗೆ ರಾಜ್ಯ ನಾಗರಿಕ ಪೂರ್ಯಕಾ ಇಲಾಖೆ ಈ ವರ್ಷ ಇನ್ನೂ ಕೃಷಿಕರಿಗೆ ನೀಡಲಾಗುವ ಉಚಿತ ಸೀಮೆಎಣ್ಣೆ ಪರವಾನಿಗೆ ವಿತರಿಸದ ಕ್ರಮವನ್ನು ಖಂಡಿಸಲಾಯಿತು.
   ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್ ಧರಣಿ ಉದ್ಘಾಟಿಸಿದರು. ಜಿಲ್ಲಾ ಕಾಂಗರೆಸ್ಸ್ ಪ್ರಧಾನ ಕಾರ್ಯದಶರ್ಿ ಸೋಮಶೇಖರ ಜೆ.ಎಸ್, ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಮುಖಮಡರಾದ ಸಿ.ಸಂಜೀವ ರೈ, ಅಬ್ದುಲ್ ರಹಿಮಾನ್,ವಿಲ್ಪ್ರೆಡ್ ಡಿಸೋಜಾ, ಅಬ್ದುಲ್ಲ, ರಜಾಕ್ ನಲ್ಕ, ಅಬ್ದುಲ್ಲ ಚವಕರ್ಾಡು, ಎಂ.ಎಚ್.ಹಾರೀಸ್ ಶೇಣಿ, ನವೀನ್ ನಾಯಕ್, ಸುನಿತ್ ಕುಮಾರ್, ಸುಂದರ ಅಪ್ಪಯ್ಯಮೂಲೆ, ಲಕ್ಷ್ಮಣ ಪ್ರಭು, ಚಂದ್ರಶೇಖರ ಭಟ್, ಕಮಲಾಕ್ಷ ಹಾಗೂ ಜನಪ್ರತಿನಿಧಿಗಳಾದ ಐತ್ತಪ್ಪ ಕುಲಾಲ್, ಶಾರದಾ ವೈ, ಸಪ್ರೀನಾ, ಜಯಶ್ರೀ ಕುಲಾಲ್, ಪುಷ್ಪ ಮೊದಲಾದವರು ನೇತೃತ್ವ ನಿಡಿದ್ದರು. ಕಾಂಗ್ರೆಸ್ಸ್ ನೇತಾರ ರವೀಂದ್ರನಾಥ ನಾಯಕ್ ಸ್ವಾಗತಿಸಿ, ಆಮು ಅಡ್ಕಸ್ಥಳ ವಂದಿಸಿದರು. ಧರಣಿಗೂ ಮೊದಲು ಪೆರ್ಲ ಪೇಟೆಯಲ್ಲಿ ರ್ಯಾಲಿ ನಡೆಸಲಾಯಿತು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries