HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ತ್ರಿವಳಿ ತಲಾಕ್ ವಿರೋಧಿಸಿ ಅಜರ್ಿ ಹಾಕಿದ್ದ ಸಂತ್ರಸ್ತೆ ಇಶ್ರಾತ್ ಜಹಾನ್ ಬಿಜೆಪಿ ಸೇರ್ಪಡೆ
    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತ್ರಿವಳಿ ತಲಾಕ್ ನಿಷೇಧಿಸುವ ಕ್ರಾಂತಿಕಾರಿ ಕಾನೂನನ್ನು ತಂದಿರುವುದನ್ನು ಪ್ರಶಂಸಿಸಿರುವ ತ್ರಿವಳಿ ತಲಾಕ್ ಸಂತ್ರಸ್ತೆ ಇಶ್ರತ್ ಜಹಾನ್ ಭಾರತೀಯ ಜನತಾ ಪಕ್ಷ(ಬಿಜೆಪಿ)ಗೆ ಸೇರ್ಪಡೆಗೊಂಡಿದ್ದಾರೆ.
   ಇಶ್ರತ್ ಜಹಾನ್ ತ್ರಿವಳಿ ತಲಾಕ್ ವಿರುದ್ಧ ಸುಪ್ರೀಂ ಕೋಟರ್್ ನಲ್ಲಿ ಅಜರ್ಿ ಸಲ್ಲಿಸಿದ್ದ ಐವರ ಪೈಕಿ ಒಬ್ಬರಾಗಿದ್ದಾರೆ. ತ್ರಿವಳಿ ತಲಾಕ್ ಸಂತ್ರಸ್ತೆಯರ ಹಿತಾಸಕ್ತಿಯಲ್ಲಿ ಮೋದಿ ಜೀ ಕಾಂತ್ರಿಕಾರಿ ಕಾನೂನನ್ನು ತಂದಿದ್ದಾರೆ. ನಿಜಕ್ಕೂ ನನಗೆ ಸಂತಸವಾಗಿದೆ. ನಾನು ಬಿಜೆಪಿಯ ಮಹಿಳಾ ವಿಭಾಗದಲ್ಲಿ ಕೆಲಸ ಮಾಡುವೆ ಎಂದು ಇಶ್ರತ್ ಹೇಳಿದ್ದಾರೆ.
   ಬಿಜೆಪಿ ಪಕ್ಷದ ಹೌರಾ ಘಟಕ ಇಶ್ರತ್ ಜಹಾನ್ ರನ್ನು ಅಭಿನಂದಿಸಿ ಪಕ್ಷಕ್ಕೆ ಸೇರಿಸಿಕೊಂಡಿತ್ತು. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದಶರ್ಿ ಸಯಂತನ್ ಬಸು ಅವರು ಇಶ್ರತ್ ಅವರನ್ನು ರಾಜ್ಯ ಮಟ್ಟದಲ್ಲಿ ಸನ್ಮಾನಿಸಿಸುವ ಕಾರ್ಯಕ್ರಮವನ್ನು ಸದ್ಯದಲ್ಲೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
  ಇನ್ನು ವಿವಾದಿತ ತ್ರಿವಳಿ ತಲಾಕ್ ಪದ್ಧತಿಯನ್ನು ಸುಪ್ರೀಂಕೋಟರ್್ ಆಗಸ್ಟ್ 22ರಂದು ಅಸಂವಿಧಾನಿಕ ಎಂದು ತೀಪರ್ು ನೀಡಿತ್ತು. ಈ ಸಂಬಂಧ ಕಾನೂನು ರಚಿಸುವಂತೆ ಕೇಂದ್ರ ಸಕರ್ಾರಕ್ಕೆ ಆದೇಶಿಸಿತ್ತು. ಅಂತೆ ಕೇಂದ್ರ ಸಕರ್ಾರ ತ್ರಿವಳಿ ತಲಾಕ್ ಮಸೂದೆಯನ್ನು ಡಿಸೆಂಬರ್ ನಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಿದ್ದು ಇನ್ನು ರಾಜ್ಯಸಭೆಯಲ್ಲಿ ಅಂಗೀಕಾರವಾಗಬೇಕಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries