HEALTH TIPS

No title

                   ವಕರ್ಾಡಿ ಸ್ವಸ್ತಿಕ್ ಫ್ರೆಂಡ್ಸ್ ಕಬಡ್ಡಿ
   ಮಂಜೇಶ್ವರ: ಸ್ವಸ್ತಿಕ್ ಫ್ರೆಂಡ್ಸ್ ವಕರ್ಾಡಿಪದವು ಇದರ 7ನೇ ವಾಷರ್ಿಕೋತ್ಸವದ ಅಂಗವಾಗಿ ಬೇಕರಿ ಜಂಕ್ಷನ್ನಲ್ಲಿರುವ ಶ್ರೀ ದುಗರ್ಾಪರಮೇಶ್ವರಿ ಭಜನಾ ಮಂದಿರದ ಮುಂಭಾಗ 58 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟವು ಇತ್ತೀಚೆಗೆ ನಡೆಯಿತು.
    ಉದ್ಘಾಟನಾ ಸಮಾರಂಭದಲ್ಲಿ ಪ್ರಗತಿಪರ ಕೃಷಿಕ ಚೇಂಡೇಲು ನಾರಾಯಣ ನಾವಡ ಅಧ್ಯಕ್ಷತೆ ವಹಿಸಿದರು. ನಿವೃತ್ತ ಯೋಧ ವೆಂಕಟೇಶ್ ತೊಕ್ಕೋಟು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಕ್ರೀಡಾಂಗಣದಲ್ಲಿ ತೆಂಗಿನಕಾಯಿ ಒಡೆದು ಪಂದ್ಯಾಟಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ವಕರ್ಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಬಿ.ಎ.ಮಜೀದ್, ಕೇರಳ ತುಳು ಅಕಾಡೆಮಿ ಸದಸ್ಯ ರಾಮಕೃಷ್ಣ  ಕಡಂಬಾರು, ವಕರ್ಾಡಿ ಗ್ರಾಮ ಪಂಚಾಯತು ಸದಸ್ಯ ಸದಾಶಿವ ನ್ಯಾಕ್ ಮಂಟಮೆ, ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯದಶರ್ಿ ಆದಶರ್್ .ಬಿ.ಯಂ ಅಂಗಡಿಪದವು, ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಬಳಿಕ ನಡೆದ ಪಂದ್ಯಾಟದಲ್ಲಿ ಕೇರಳ - ಕನರ್ಾಟಕದ 30 ತಂಡಗಳು ಭಾಗವಹಿಸಿದವು. ಪ್ರಥಮ ಸ್ಥಾನವನ್ನು ತಮಿಳು ಯೂನಿವಸರ್ಿಟಿ, ದ್ವಿತೀಯ ಸ್ಥಾನವನ್ನು ಯುವಧಾರ ಚಿಗುರುಪಾದೆ, ತೃತೀಯ ಸ್ಥಾನವನ್ನು ಯುವಶಕ್ತಿ ವಕರ್ಾಡಿ, ಚತುರ್ಥ ಸ್ಥಾನವನ್ನು ಸತ್ಯದೇವತೆ ಕಳಿಯೂರು ಪಡೆದರು. ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ವಕರ್ಾಡಿ ಗ್ರಾಮ ಪಂಚಾಯತು ಸದಸ್ಯ ಆನಂದ ತಚ್ಚಿರೆ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತು ಸದಸ್ಯ ಬಿ.ಯಂ.ಆಶಾಲತ ಪೆಲಪ್ಪಾಡಿ, ಸದಾಶಿವ ಯು, ವಕರ್ಾಡಿ ಗ್ರಾಮ ಪಂಚಾಯತು ಸದಸ್ಯ ವಸಂತ ಎಸ್, ಡಾ.ಶಂಕರ ಕೆ.ಎಸ್, ರವಿ ಮುಡಿಮಾರ್, ಮಹೇಶ್ ಕೆ.ವಿ, ಗೀರಿಶ್ ಮೀಯಪದವು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದು, ಶುಭಾಸಂಶನೆಗೈದು ವಿಜೇತ ತಂಡಗಳಿಗೆ ಬಹುಮಾನವನ್ನು ವಿತರಿಸಿದರು. ಈ ವೇಳೆ ನಿವೃತ್ತ ಮಾಜಿ ಸೈನಿಕ ವೆಂಕಟೇಶ್ ತೊಕ್ಕೋಟುರವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ, ಫಲವಸ್ತುವನ್ನು ನೀಡಿ ಸಮ್ಮಾನಿಸಲಾಯಿತು. ಸಂಸ್ಥೆಯ ಸದಸ್ಯ ರವೀಂದ್ರ ಕುಲಾಲ್ ಸ್ವಾಗತಿಸಿ, ಪ್ರವೀಣ ಕುಂಪಲ ಕಾರ್ಯಕ್ರಮ ನಿರೂಪಿಸಿ, ಪುಷ್ಪರಾಜ ವಕರ್ಾಡಿಪದವು ವಂದಿಸಿದರು.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries