ವಿಶ್ವದ ಎಲ್ಲಾ ಪ್ರಮುಖ ಧರ್ಮಗಳನ್ನು ಭಾರತ ಗೌರವಿಸುತ್ತದೆ: ಪ್ರಧಾನಿ ಮೋದಿ
ನವದೆಹಲಿ; ವಿಶ್ವದ ಎಲ್ಲಾ ಪ್ರಮುಖ ಧರ್ಮಗಳನ್ನು ಭಾರತ ಗೌರವಿಸುತ್ತದೆ. ಭಯೋತ್ಪಾದನೆ ಹಾಗೂ ಮೂಲಭೂತೀಕರಣದ ವಿರುದ್ಧ ಹೋರಾಟ ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ. ಆದರೆ, ಯುವಕರನ್ನು ತಪ್ಪಿ ಹಾದಿಗೆಳೆಯುತ್ತಿರುವವರ ವಿರುದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ತಿಳಿಸಿದರು.
ರಾಜಧಾನಿ ದೆಹಲಿಯ ವಿಜ್ಞಾನ ಭವನದಲ್ಲಿ ಇಸ್ಲಾಂ ಪರಂಪರೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು,ಭಾರತದ ಯುವಕರು ಇಸ್ಲಾಂ ಧರ್ಮದಲ್ಲಿರುವ ಮಾನವೀಯತೆಯ ಅಂಶಗಳೊಂದಿಗೆ ತಮ್ಮನ್ನು ತಾವು ಸಂಯೋಜಿಸಿಕೊಳ್ಳಬೇಕು. ಮತ್ತು ಇದೇ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನವನ್ನೂ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರತೀಯೊಂದು ಧರ್ಮವೂ ಮಾನವೀಯತೆಯ ಮೌಲ್ಯಗಳನ್ನು ಉತ್ತೇಜಿಸುತ್ತವೆ. ವಿಶ್ವದಲ್ಲಿರುವ ಎಲ್ಲಾ ಧರ್ಮಗಳನ್ನೂ ಭಾರತ ಗೌರವಿಸುತ್ತದೆ. ಭಯೋತ್ಪಾದನೆ ಹಾಗೂ ಮೂಲಭೂತೀಕರಣದ ವಿರುದ್ಧ ಹೋರಾಟ ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ. ಆದರೆ, ಯುವಕರನ್ನು ತಪ್ಪಿ ಹಾದಿಗೆಳೆಯುವವರ ವಿರುದ್ಧವಾಗಿದೆ. ಭಾರತದ ಪ್ರಜಾಪ್ರಭುತ್ವ ಕೇವಲ ರಾಜಕೀಯ ವ್ಯವಸ್ಥೆಯಲ್ಲ. ಇಲ್ಲಿನ ಪ್ರಜಾಪ್ರಭುತ್ವವು ವಯಸ್ಸಾದ ಹಳೆಯ ಬಹುಸಂಸ್ಕೃತಿಯನ್ನು ಹೊಂದಿದೆ ಎಂದರು.
ಎಲ್ಲಾ ನಂಬಿಕೆಗಳೂ ಕೂಡ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುತ್ತವೆ. ಹೀಗಾಗಿ ನಮ್ಮ ಯುವಕರು ತಮ್ಮನ್ನು ತಾವು ಇಸ್ಲಾಂ ಧರ್ಮದ ಮಾನವೀಯ ಅಂಶಗಳೊಂದಿಗೆ ಸಂಯೋಜಿಸಿಕೊಳ್ಳಬೇಕು ಮತ್ತು ಆಧುನಿತ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕೆಂದು ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದರು
ನವದೆಹಲಿ; ವಿಶ್ವದ ಎಲ್ಲಾ ಪ್ರಮುಖ ಧರ್ಮಗಳನ್ನು ಭಾರತ ಗೌರವಿಸುತ್ತದೆ. ಭಯೋತ್ಪಾದನೆ ಹಾಗೂ ಮೂಲಭೂತೀಕರಣದ ವಿರುದ್ಧ ಹೋರಾಟ ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ. ಆದರೆ, ಯುವಕರನ್ನು ತಪ್ಪಿ ಹಾದಿಗೆಳೆಯುತ್ತಿರುವವರ ವಿರುದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ತಿಳಿಸಿದರು.
ರಾಜಧಾನಿ ದೆಹಲಿಯ ವಿಜ್ಞಾನ ಭವನದಲ್ಲಿ ಇಸ್ಲಾಂ ಪರಂಪರೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು,ಭಾರತದ ಯುವಕರು ಇಸ್ಲಾಂ ಧರ್ಮದಲ್ಲಿರುವ ಮಾನವೀಯತೆಯ ಅಂಶಗಳೊಂದಿಗೆ ತಮ್ಮನ್ನು ತಾವು ಸಂಯೋಜಿಸಿಕೊಳ್ಳಬೇಕು. ಮತ್ತು ಇದೇ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನವನ್ನೂ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರತೀಯೊಂದು ಧರ್ಮವೂ ಮಾನವೀಯತೆಯ ಮೌಲ್ಯಗಳನ್ನು ಉತ್ತೇಜಿಸುತ್ತವೆ. ವಿಶ್ವದಲ್ಲಿರುವ ಎಲ್ಲಾ ಧರ್ಮಗಳನ್ನೂ ಭಾರತ ಗೌರವಿಸುತ್ತದೆ. ಭಯೋತ್ಪಾದನೆ ಹಾಗೂ ಮೂಲಭೂತೀಕರಣದ ವಿರುದ್ಧ ಹೋರಾಟ ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ. ಆದರೆ, ಯುವಕರನ್ನು ತಪ್ಪಿ ಹಾದಿಗೆಳೆಯುವವರ ವಿರುದ್ಧವಾಗಿದೆ. ಭಾರತದ ಪ್ರಜಾಪ್ರಭುತ್ವ ಕೇವಲ ರಾಜಕೀಯ ವ್ಯವಸ್ಥೆಯಲ್ಲ. ಇಲ್ಲಿನ ಪ್ರಜಾಪ್ರಭುತ್ವವು ವಯಸ್ಸಾದ ಹಳೆಯ ಬಹುಸಂಸ್ಕೃತಿಯನ್ನು ಹೊಂದಿದೆ ಎಂದರು.
ಎಲ್ಲಾ ನಂಬಿಕೆಗಳೂ ಕೂಡ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುತ್ತವೆ. ಹೀಗಾಗಿ ನಮ್ಮ ಯುವಕರು ತಮ್ಮನ್ನು ತಾವು ಇಸ್ಲಾಂ ಧರ್ಮದ ಮಾನವೀಯ ಅಂಶಗಳೊಂದಿಗೆ ಸಂಯೋಜಿಸಿಕೊಳ್ಳಬೇಕು ಮತ್ತು ಆಧುನಿತ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕೆಂದು ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದರು