HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಧಾಮರ್ಿಕತೆಗಳನ್ನು ಅಭ್ಯಸಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ರವೀಶ ತಂತ್ರಿ
    ಮುಳ್ಳೇರಿಯ: ಧಾಮರ್ಿಕ ವಿಚಾರ ಧಾರೆಗಳು ಸುಸ್ಥಿರ ಸಮಾಜ ನಿಮರ್ಾಣದ ಮೆಟ್ಟಲುಗಳಾಗಿದ್ದು, ಅವುಗಳನ್ನು ಅಭ್ಯಸಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.  ಆಥರ್ಿಕ ಶ್ರೀಮಂತಿಕೆ ಕ್ಷಣಿಕ; ಪಾರಮಾಥರ್ಿಕ ಶ್ರೀಮಂತಿಕೆ ಶಾಶ್ವತ. ದೈವಿಕ ಶಕ್ತಿಗಳು ನಮ್ಮಲ್ಲಿರುವ ಮಾಲಿನ್ಯವನ್ನು ದೂರಮಾಡುತ್ತವೆ. ಭಾವನೆಗಳನ್ನು ಗೌರವಿಸುವ ಸಂಸ್ಕಾರ ಭಾರತೀಯನಲ್ಲಿದೆ. ಆದುದರಿಂದ ಭಾರತವು ಪ್ರಪಂಚದಲ್ಲಿ ಶ್ರೇಷ್ಠವೆನಿಸಿಕೊಳ್ಳುತ್ತಿದೆ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ತಿಳಿಸಿದರು.
    ಅವರು ಕೋಟೆಬಯಲು ಕುಂಡಂಗುಳಿ ವಾಗ್ಮಾನ್ ಮೂಲನಾಗ, ರಕ್ತೇಶ್ವರಿ, ಗುಳಿಗ ಸಾನ್ನಿಧ್ಯಗಳ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳ ಅಂಗವಾಗಿ ಕುಂಟಾರು ಸಮೀಪದ ಜಾಲುಮನೆಯಲ್ಲಿ ಭಾನುವಾರ ನಡೆದ ಧಾಮರ್ಿಕ ಸಭೆಯಲ್ಲಿ ಧಾಮರ್ಿಕ ಉಪನ್ಯಾಸಗೈದು ಮಾತನಾಡಿದರು.
    ಸೇವಾ ಸಮಿತಿ ಅಧ್ಯಕ್ಷ ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಮತ್ತು ಇರುವಯಲ್ ಬ್ರಹ್ಮಶ್ರೀ ಕೃಷ್ಣದಾಸ್ ತಂತ್ರಿಯವರು ಆಶೀರ್ವಚನ ನೀಡಿದರು. ಬ್ರಹ್ಮಶ್ರೀ ವಾಸುದೇವ ತಂತ್ರಿ, ಬ್ರಹ್ಮಶ್ರೀ ರವೀಶ ತಂತ್ರಿ, ಇರುವಯಲ್ ಬ್ರಹ್ಮಶ್ರೀ ಕೃಷ್ಣದಾಸ್ ತಂತ್ರಿಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕುಂಟಾರು ಶ್ರೀ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್, ತಾನೋಜಿ ರಾವ್ ತುಂಬಡ್ಕ ಉಪಸ್ಥಿತರಿದ್ದರು. ಶಿಲ್ಪಿಗಳಾದ ಮಂಜುನಾಥ ಮತ್ತು ಪುಷ್ಪರಾಜ್ ಅವರನ್ನು ಗೌರವಿಸಲಾಯಿತು.
    ಗಿರೀಶ್ ತುಂಬಡ್ಕ ಸ್ವಾಗತಿಸಿ, ಕಾವ್ಯಾ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ನಿಶಾ ಸುಧೀರ್ ವಂದಿಸಿದರು.
       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries