HEALTH TIPS

No title

                   ಪರಿಸರ ದಿನ- ಜಿಲ್ಲೆಯ ಶಾಲಾ ಮಕ್ಕಳಿಗೆ 1.5 ಲಕ್ಷಗಿಡ
    ಕುಂಬಳೆ: ಜಿಲ್ಲೆಯ ಶಾಲೆಗಳಲ್ಲಿ ಪರಿಸರ ದಿನದಂದು ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ. ಮಂಜೇಶ್ವರ, ಕಾಞಂಗಾಡು ಸಹಿತ ಜಿಲ್ಲೆಯ ನಾಲ್ಕು ತಾಲೂಕು ಕೇಂದ್ರಗಳಲ್ಲಿನ ವಿದ್ಯಾಲಯಗಳಲ್ಲಿ ಜೂ.5 ರಂದು ಪರಿಸರ ದಿನಾಚರಣೆ ನಡೆಯಲಿದೆ. ಮಾವು, ಪೇರಳೆ, ಸೀತಾಫಲ, ನೆಲ್ಲಿ, ಸಹಿತ ವಿವಿಧ ಹಣ್ಣಿನ ಸಸಿಗಳನ್ನು ಶಾಲಾ ಮಕ್ಕಳಿಗೆ ವಿತರಿಸಿ ನೆಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
   ಕರಾವಳಿ ತೀರ ಪ್ರದೇಶಗಳಲ್ಲಿ ಗಾಳಿಮರದ ಸಸಿಗಳನ್ನು ನೆಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನವಂಬರ್, ಡಿಸೆಂಬರ್ ತಿಂಗಳಲ್ಲಿ ವೈಜ್ಞಾನಿಕ ಸಿದ್ದಪಡಿಸಿದ ಸುಮಾರು 1.5 ಲಕ್ಷ ಸಸಿಗಳನ್ನು ನಾನಾ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿತರಿಸಲಾಗುವುದು.ಸಾಮಾಜಿಕ ಅರಣ್ಯೀಕರಣದ ಭಾಗವಾಗಿ ಈ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ನೀಡಲ್ಪಟ್ಟ ಸಸಿಗಳ ವಿವರ ಮತ್ತು ಅವುಗಳ  ಬೆಳವಣಿಗೆಯನ್ನು ದೃಢೀಕರಿಸಿ ಅಂಕಿ-ಅಂಶ ಸಿದ್ದಪಡಿಸಲಾಗುತ್ತದೆ. ಕಾಞಂಗಾಡು ನೆಹರೂ ಕಾಲೇಜು ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ವಿದ್ಯಾಥರ್ಿಗಳು ಅಧ್ಯಾಪಕರ ಸಹಾಯದೊಂದಿಗೆ ಅರಣ್ಯೀಕರಣದ ಅಂಕಿ-ಅಂಶ ಸಂಗ್ರಹದಲ್ಲಿ ಸಹಕರಿಸಲಿದ್ದಾರೆ ಎಂದು ಇಲಾಖೆ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries