ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ
ಪೆರ್ಲ: ಕೇಂದ್ರ ಸರಕಾರದ ಆರೋಗ್ಯ ಇಲಾಖೆಯ ವತಿಯಿಂದ ನಡೆಸಲ್ಪಡುವ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ (ಆರ್ಕೆಎಸ್ಕೆ)ದ ಉದ್ಘಾಟನೆಯು ಎಣ್ಮಕಜೆ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಸೋಮವಾರ ಜರಗಿತು.
5ನೇ ತರಗತಿಯಿಂದ ಪ್ಲಸ್ಟು ವರೆಗಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಯ್ದ ವಿದ್ಯಾಥರ್ಿ - ವಿದ್ಯಾಥರ್ಿನಿಯರಿಗಾಗಿ ಹಮ್ಮಿಕೊಂಡ ಮೂರು ದಿನಗಳ ಈ ತರಬೇತಿ ಶಿಬಿರವನ್ನು ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್.ಭಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹದಿಹರೆಯದ ಮಕ್ಕಳಿಗೆ ಇಂತಹ ತರಬೇತಿ ಅಗತ್ಯವಾಗಿ ಬೇಕು ಎಂದರು. ವಿದ್ಯಾಥರ್ಿಗಳ ಶಾರೀರಿಕ, ಮಾನಸಿಕ ಬೆಳವಣಿಗೆಗೆ ಇದು ಸಹಕಾರಿಯಾಗಿದೆ. ಕೇಂದ್ರ ಸರಕಾರದ ಮುಖಾಂತರ ದೇಶದಾದ್ಯಂತ ನಡೆಯುತ್ತಿರುವ ಈ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ನುಡಿದರು. ಶಿಬಿರಾಥರ್ಿಗಳಿಗೆ ಅವರು ಈ ಸಂದರ್ಭ ಉಚಿತ ಬ್ಯಾಗ್ ವಿತರಿಸಿದರು.
ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಟೀನು ಸಮಾರಂಭದ ಅಧ್ಯಕ್ಷತೆ ವಹಿಸಿ, ಶಿಬಿರದ ಕುರಿತು ಸಮಗ್ರ ಮಾಹಿತಿ ನೀಡಿದರು. ಗ್ರಾಮ ಪಂಚಾಯತು ಪ್ರತಿನಿಧಿ ಆಯಿಷಾ ಎ.ಎ.ಪೆರ್ಲ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕುಂಬ್ಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಪರಿವೀಕ್ಷಕ ರಾಬಿನ್ಸನ್, ಪೆರ್ಲ ಆರೋಗ್ಯ ಕೇಂದ್ರದ ಬೈಜು, ಕೌನ್ಸಿಲರ್ ಅಶ್ವತಿ ಎಸ್.ಕೆ., ಶ್ರೀಜಾ ಸಿಸ್ಟರ್ ಮುಂತಾದವರು ಭಾಗವಹಿಸಿದ್ದರು.
ಮೂರು ದಿನಗಳ ಕಾಲ ಸ್ವಯಂ ರಕ್ಷಣೆ, ಲೈಂಗಿಕ ರೋಗಗಳು, ಗೆಳೆತನದ ವಿಶ್ವಾಸ, ಹದಿಹರೆಯದ ಆರೋಗ್ಯ, ಪ್ರಥಮ ಚಿಕಿತ್ಸೆ ಹಾಗೂ ಅಪಘಾತ ನಿರ್ವಹಣೆ, ಬಾಲ್ಯ ವಿವಾಹದ ಕೆಡುಕುಗಳು, ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಕುರಿತು ಸಂಪನ್ಮೂಲ ವ್ಯಕ್ತಿಗಳು ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ. ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಬೈಜು ಸ್ವಾಗತಿಸಿ, ಪ್ರೇಮಾ ವಂದಿಸಿದರು. ಮೇ 30ರಂದು ಈ ಕಾರ್ಯಕ್ರಮವು ಸಮಾಪ್ತಿಯಾಗಲಿದೆ.
ಪೆರ್ಲ: ಕೇಂದ್ರ ಸರಕಾರದ ಆರೋಗ್ಯ ಇಲಾಖೆಯ ವತಿಯಿಂದ ನಡೆಸಲ್ಪಡುವ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ (ಆರ್ಕೆಎಸ್ಕೆ)ದ ಉದ್ಘಾಟನೆಯು ಎಣ್ಮಕಜೆ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಸೋಮವಾರ ಜರಗಿತು.
5ನೇ ತರಗತಿಯಿಂದ ಪ್ಲಸ್ಟು ವರೆಗಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಯ್ದ ವಿದ್ಯಾಥರ್ಿ - ವಿದ್ಯಾಥರ್ಿನಿಯರಿಗಾಗಿ ಹಮ್ಮಿಕೊಂಡ ಮೂರು ದಿನಗಳ ಈ ತರಬೇತಿ ಶಿಬಿರವನ್ನು ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್.ಭಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹದಿಹರೆಯದ ಮಕ್ಕಳಿಗೆ ಇಂತಹ ತರಬೇತಿ ಅಗತ್ಯವಾಗಿ ಬೇಕು ಎಂದರು. ವಿದ್ಯಾಥರ್ಿಗಳ ಶಾರೀರಿಕ, ಮಾನಸಿಕ ಬೆಳವಣಿಗೆಗೆ ಇದು ಸಹಕಾರಿಯಾಗಿದೆ. ಕೇಂದ್ರ ಸರಕಾರದ ಮುಖಾಂತರ ದೇಶದಾದ್ಯಂತ ನಡೆಯುತ್ತಿರುವ ಈ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ನುಡಿದರು. ಶಿಬಿರಾಥರ್ಿಗಳಿಗೆ ಅವರು ಈ ಸಂದರ್ಭ ಉಚಿತ ಬ್ಯಾಗ್ ವಿತರಿಸಿದರು.
ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಟೀನು ಸಮಾರಂಭದ ಅಧ್ಯಕ್ಷತೆ ವಹಿಸಿ, ಶಿಬಿರದ ಕುರಿತು ಸಮಗ್ರ ಮಾಹಿತಿ ನೀಡಿದರು. ಗ್ರಾಮ ಪಂಚಾಯತು ಪ್ರತಿನಿಧಿ ಆಯಿಷಾ ಎ.ಎ.ಪೆರ್ಲ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕುಂಬ್ಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಪರಿವೀಕ್ಷಕ ರಾಬಿನ್ಸನ್, ಪೆರ್ಲ ಆರೋಗ್ಯ ಕೇಂದ್ರದ ಬೈಜು, ಕೌನ್ಸಿಲರ್ ಅಶ್ವತಿ ಎಸ್.ಕೆ., ಶ್ರೀಜಾ ಸಿಸ್ಟರ್ ಮುಂತಾದವರು ಭಾಗವಹಿಸಿದ್ದರು.
ಮೂರು ದಿನಗಳ ಕಾಲ ಸ್ವಯಂ ರಕ್ಷಣೆ, ಲೈಂಗಿಕ ರೋಗಗಳು, ಗೆಳೆತನದ ವಿಶ್ವಾಸ, ಹದಿಹರೆಯದ ಆರೋಗ್ಯ, ಪ್ರಥಮ ಚಿಕಿತ್ಸೆ ಹಾಗೂ ಅಪಘಾತ ನಿರ್ವಹಣೆ, ಬಾಲ್ಯ ವಿವಾಹದ ಕೆಡುಕುಗಳು, ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಕುರಿತು ಸಂಪನ್ಮೂಲ ವ್ಯಕ್ತಿಗಳು ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ. ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಬೈಜು ಸ್ವಾಗತಿಸಿ, ಪ್ರೇಮಾ ವಂದಿಸಿದರು. ಮೇ 30ರಂದು ಈ ಕಾರ್ಯಕ್ರಮವು ಸಮಾಪ್ತಿಯಾಗಲಿದೆ.