HEALTH TIPS

No title

       ರಾಜ್ಯ ಬಿಜೆಪಿ ಮುಖಂಡನ ಅಪಸ್ವರ-ತಂತ್ರಿಗಳನ್ನು ಉಚ್ಚಾಟಿಸುವ ಹೇಳಿಕೆ
   ಬದಿಯಡ್ಕ: ಬದಿಯಡ್ಕದಲ್ಲಿ ಕಳೆದ ಶುಕ್ರವಾರ ನಡೆದಿದ್ದ ಬೃಹತ್ ಹಿಂದೂ ಸಮಾಜೋತ್ಸವದ ಬಳಿಕ ವಿವಿಧ ಕಾರಣಗಳಿಂದ ರಾಜ್ಯಾದ್ಯಂತ ಹಲವು ವಿವಾದಗಳು ಹುಟ್ಟಿಕೊಳ್ಳುತ್ತಿದ್ದು, ಇದೀಗ ರಾಜ್ಯ ಬಿಜೆಪಿಯ ಸದಸ್ಯರೋರ್ವರು ಈ ಬಗ್ಗೆ ಅಪಸ್ವರ ಎತ್ತುವ ಮೂಲಕ ತಲ್ಲಣಗೊಳ್ಳುವ ಪರಿಸ್ಥಿತಿ ನಿಮರ್ಾಣಮಾಡಿದ್ದಾರೆ.
   ರಾಜ್ಯ ಬಿಜೆಪಿ ಮೀಡಿಯಾ ಸೆಲ್ ಉಪಾಧ್ಯಕ್ಷ ಶಿವಶಂಕರ್ ರವರು ಮಂಗಳವಾರ ಮಲೆಯಾಳ ದೃಶ್ಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡುತ್ತ, ಬದಿಯಡ್ಕದಲ್ಲಿ ನಡೆದ ಹಿಂದೂ ಸಮಾಜೋತ್ಸವದ ವೇದಿಕೆಯೇರಿದ ಬಿಜೆಪಿ ಮಂಜೇಶ್ವರ ಮಂಡಲ ಪ್ರಭಾರಿ, ಹಿಂದೂ ಐಕ್ಯವೇದಿ ರಾಜ್ಯ ಉಪಾಧ್ಯಕ್ಷ ರವೀಶ ತಂತ್ರಿ ಕುಂಟಾರು ರವರನ್ನು ಕೂಡಲೇ ಪಕ್ಷದಿಂದ ಉಚ್ಚಾಟಿಸಬೇಕಾಗಿದೆ ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
   ಶಿವಶಂಕರ್ ರವರ ಹೇಳಿಕೆಯಿಂದ ರವೀಶ ತಂತ್ರಿ ಅಭಿಮಾನಿ ಬಳಗವೊಂದು ಇದರ ವಿರುದ್ದ ರಂಗಕ್ಕೆ ಬಂದಿದ್ದು, ಶಿವಶಂಕರ್ ಹೇಳಿಕೆಯಿಂದ ಕುಪಿತರಾಗಿ ಶಿವಶಂಕರ್ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್, ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ರವರಿಗೆ ಪತ್ರ ಬರೆಯುವುದಾಗಿ ಮಂಗಳವಾರ ಸಂಜೆ ತಿಳಿಸಿದ್ದಾರೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries