HEALTH TIPS

No title

                  ಕುಲಾಲ ಸಂಘ ವಕರ್ಾಡಿ ಶಾಖೆ ಮಹಾಸಭೆ- ಸಮ್ಮಾನ
     ಮಂಜೇಶ್ವರ:  ಕಾಸರಗೋಡು ತಾಲೂಕು ಕುಲಾಲ ಸುಧಾರಕ ಸಂಘ ವಕರ್ಾಡಿ ಶಾಖೆಯ ವಾಷರ್ಿಕ ಮಹಾಸಭೆ ದೈಗೋಳಿಯಲ್ಲಿರುವ ಸಂಘದ ಕಚೇರಿಯಲ್ಲಿ ಭಾನುವಾರ ಜರಗಿತು.
   ಬೆಳಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ನಂತರ ವಾಷರ್ಿಕ ಸಭೆ ನಡೆಯಿತು. ಯಶೋದ ಹಾಗೂ ಶಶಿಕಲ ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ಕಾರ್ಯದಶರ್ಿ ಚರಣ್ರಾಜ್ ವರದಿ ವಾಚಿಸಿದರು. ಕೇಶವ ಆಯ-ವ್ಯಯ ಮಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ನಾರಾಯಣ ಸಾಲಿಯಾನ್ ನೂಜಿ ವಹಿಸಿದ್ದರು. ತಾಲೂಕು ಕುಲಾಲ ಸಂಘದ ಅಧ್ಯಕ್ಷ ಜಯಂತ ಅರಿಬೈಲು, ಕಾರ್ಯದಶರ್ಿ ರವೀಂದ್ರ ಮುನ್ನಿಪ್ಪಾಡಿ, ಮಹಿಳಾ ಘಟಕ ವಕರ್ಾಡಿ ಶಾಖೆ ಅಧ್ಯಕ್ಷೆ ಸರೋಜ ನೂಜಿ, ವಕರ್ಾಡಿ ಶಾಖೆ ಸಂಚಾಲಕ ಬಾಬು ಮೂಲ್ಯ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಈಶ್ವರ ಕುಲಾಲ್ ಕಣ್ವತೀರ್ಥ ಉಪಸ್ಥಿತರಿದ್ದರು. 
   ಈ ಸಂದರ್ಭದಲ್ಲಿ ತುಳುನಾಡ ಕಲಾಕದಿಕೆ ರಾಜೇಶ್ ಮುಗುಳಿ ಅವರನ್ನು ಸಮ್ಮಾನಿಸಲಾಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ನಾರಾಯಣ ಸಾಲಿಯಾನ್ ನೂಜಿ, ಉಪಾಧ್ಯಕ್ಷರಾಗಿ ಸತೀಶ್ ಮಡ್ವ, ಕಾರ್ಯದಶರ್ಿಯಾಗಿ ಚರಣ್ರಾಜ್, ಜೊತೆ ಕಾರ್ಯದಶರ್ಿಯಾಗಿ ಭಾಸ್ಕರ ಮಡ್ವ, ಕೋಶಾಧಿಕಾರಿಯಾಗಿ ವಸಂತ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸರೋಜ ನೂಜಿ, ಕಾರ್ಯದಶರ್ಿಯಾಗಿ ಶಶಿಕಲ ಹಾಗೂ ಇತರ ಹತ್ತು ಮಂದಿ ಸದಸ್ಯರನ್ನು ಆರಿಸಲಾಯಿತು. ಬಳಿಕ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ಸುಧೀರ್ ರಂಜನ್ ಸ್ವಾಗತಿಸಿ, ಭಾಸ್ಕರ ಮಡ್ವ ವಂದಿಸಿದರು. ರವೀಂದ್ರ ಕುಲಾಲ್ ವಕರ್ಾಡಿ ಕಾರ್ಯಕ್ರಮ ನಿರೂಪಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries