HEALTH TIPS

No title

                ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯಿಂದ ಸಹಾಯ ಹಸ್ತ
    ಮಂಜೇಶ್ವರ: ಪೆರ್ಲ ಬಳಿಯ ಮಣಿಯಂಪಾರೆ ನಿವಾಸಿ ಸುಂದರ ಬೆಳ್ಚಾಡರ ಮನೆ ನಿಮರ್ಾಣಕ್ಕೆ ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ 25,000 ರೂ.ಯ ಸಹಾಯ ಹಸ್ತ ನೀಡುವ ಮೂಲಕ ಅವರ ಕನಸಿನ ಸೂರಿಗೆ ನೆರವಾಗಿದೆ. ಸುಂದರ ಬೆಳ್ಚಾಡರ ಮನೆ ಸಂಪೂರ್ಣ ಧರಾಶಾಹಿಯಾಗಿ ಇದೀಗ ಶೌಚಾಲಯದ ಕೊಠಡಿಯಲ್ಲಿ ಪತ್ನಿ ಜೊತೆ ವಾಸಿಸುತ್ತಿದ್ದಾರೆ. ದಂಪತಿಗಳಿಗೆ ಅಸೌಖ್ಯ ಕೂಡಾ ಇದೆ. ಮಳೆಗಾಲದಲ್ಲಿ ಜೋಪಡಿಯಲ್ಲಿ ವಾಸಿಸುತ್ತಿರುವ ಈ ಕುಟುಂಬದ ದೀನ ಸ್ಥಿತಿಯನ್ನರಿತು ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ  ಮಂಜೇಶ್ವರ ತಮ್ಮ 13ನೇ ಯೋಜನೆಯಡಿ ಸಂಸ್ಥೆಯ ಸದಸ್ಯರಿಂದಲೇ ಸಂಗ್ರಹಿಸಿದ ಮೊತ್ತವನ್ನು ಸುಂದರ ಅವರ ಮನೆಗೆ  ತೆರಳಿ ನೀಡಲಾಯಿತು.
   ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ಗೌರವ ಸಲಹೆಗಾರ ನ್ಯಾಯವಾದಿ  ನವೀನ್ ರಾಜ್ ಕೆ.ಜೆ. ಅವರು ಸಹಾಯ ಹಸ್ತವನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಸಮಾಜ ಸೇವಾ ಸಂಸ್ಥೆ ಜೈ ಶ್ರೀರಾಮ್ ಇಲ್ಲಿನ ವೃದ್ಧ ದಂಪತಿಗಳ ದಯನೀಯ ಸ್ಥಿತಿಯನ್ನು ಕಂಡು ಸದಸ್ಯರು ಸಂಗ್ರಹಿಸಿದ ಮೊತ್ತವನ್ನು ಮನೆ ನಿಮರ್ಾಣಕ್ಕೆ ನೀಡುತ್ತಿದ್ದೇವೆ. ಬಚ್ಚಲು ಕೋಣೆಯಲ್ಲಿ ದಿನ ಕಳೆಯುತ್ತಿರುವ ವೃದ್ಧ ದಂಪತಿಗಳ ಸ್ಥಿತಿ ಶೋನೀಯವಾಗಿದ್ದು, ಗಾಳಿ- ಮಳೆಗೆ ಮೈಯೊಡ್ಡಿ ದಿನ ಕಳೆಯುತ್ತಿರುವ ವೃದ್ಧ ದಂಪತಿಗಳ ಮನೆಯು ಅತೀ ಶೀಘ್ರದಲ್ಲಿ ನಿಮರ್ಾಣವಾಗಲಿದೆ ಎಂದು ಶುಭ ಹಾರೈಸಿದರು. ಈ ವೇಳೆ ಸಂಸ್ಥೆಯ ಪದಾದಿಕಾರಿಗಳಾದ ಆಶಾ ಲೋಕೇಶ್ ಮಾಡ, ನಳಿನ್ ಆಚಾರ್ಯ ಉದ್ಯಾವರ, ಲೋಕೆಶ್ ಮಾಡ, ಜಗದೀಶ್ ಪ್ರತಾಪನಗರ, ಗಿರಿ ವೀರನಗರ, ಸತ್ಯ ವೀರನಗರ, ಪ್ರದೀಪ್ ಮೊರತ್ತಣೆ, ರತನ್ ಕುಮಾರ್ ಹೊಸಂಗಡಿ, ಸುಕೇಶ್ ಬೆಜ್ಜ, ರೂಪೇಶ್ ಉಪ್ಪಳ, ಅನಿಲ್ ಮಣಿಯಂಪಾರೆ, ಕೀರ್ತನ್ ಬೆಜ್ಜ, ದೀಪಕ್ ಉಪ್ಪಳ ಮೊದಲಾದವರು ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries