ಎಕೆಪಿಎ ಯಿಂದ ಕಲಿಕೋಪಕರಣ ವಿತರಣೆ
ಮಧೂರು : ಆಲ್ ಕೇರಳ ಫೋಟೋಗ್ರಾಫಸರ್್ ಅಸೋಸಿಯೇಶನ್ ಕಾಸರಗೋಡು ಈಸ್ಟ್ ಯೂನಿಟ್ ವತಿಯಿಂದ ಸಿರಿಬಾಗಿಲು ಸರಕಾರೀ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೀಡಿದ ಬ್ಯಾಗ್ ಮತ್ತು ನೀರಿನ ಬಾಟಲಿಗಳ ಕಲಿಕೋಪಕರಣಗಳನ್ನು ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್(ಎ.ಕೆ.ಪಿ.ಎ.) ವಲಯ ಅಧ್ಯಕ್ಷ ಗೋವಿಂದನ್ ಚೆಂಗರಂಕಾಡ್ ಅವರು ಗ್ರಾ.ಪಂ. ಸದಸ್ಯೆ ಮೈಮೂನ ಅವರಿಗೆ ಹಸ್ತಾಂತರಿಸಿದರು.
ಅವರು ಮಾತನಾಡುತ್ತಾ ಕಲಿಕೆಗೆ ಪೂರಕವಾಗುವಂತಹ ವಸ್ತುಗಳನ್ನು ನೀಡುವ ಮೂಲಕ ಮಕ್ಕಳಲ್ಲಿ ವಿದ್ಯಾಭ್ಯಾಸದ ಕುರಿತು ಆಸಕ್ತಿಯನ್ನು ಹೆಚ್ಚಿಸಬಹುದು. ಇನ್ನೂ ಓದಬೇಕೆಂಬ ಹಂಬಲ ಅವರಲ್ಲಿ ಬರಬೇಕು. ಇಂತಹ ಚಟುವಟಿಕೆಗಳು ಅದಕ್ಕೆ ಸಹಾಯಕವಾಗಲಿ ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯಿನಿ ಲೀಲ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಜೀದ್, ಅಲವಿ, ಗಂಗಾಧರನ್, ಎ.ಕೆ.ಪಿ.ಎ. ಜಿಲ್ಲಾ ಸಮಿತಿ ಸದಸ್ಯರಾದ ಸಂಜೀವ ರೈ, ಚಂದ್ರಶೇಖರ, ದಿನೇಶ್ ಇನ್ಸೈಟ್ ಮಾತನಾಡಿದರು. ಮಕ್ಕಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು.
ಮಧೂರು : ಆಲ್ ಕೇರಳ ಫೋಟೋಗ್ರಾಫಸರ್್ ಅಸೋಸಿಯೇಶನ್ ಕಾಸರಗೋಡು ಈಸ್ಟ್ ಯೂನಿಟ್ ವತಿಯಿಂದ ಸಿರಿಬಾಗಿಲು ಸರಕಾರೀ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೀಡಿದ ಬ್ಯಾಗ್ ಮತ್ತು ನೀರಿನ ಬಾಟಲಿಗಳ ಕಲಿಕೋಪಕರಣಗಳನ್ನು ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್(ಎ.ಕೆ.ಪಿ.ಎ.) ವಲಯ ಅಧ್ಯಕ್ಷ ಗೋವಿಂದನ್ ಚೆಂಗರಂಕಾಡ್ ಅವರು ಗ್ರಾ.ಪಂ. ಸದಸ್ಯೆ ಮೈಮೂನ ಅವರಿಗೆ ಹಸ್ತಾಂತರಿಸಿದರು.
ಅವರು ಮಾತನಾಡುತ್ತಾ ಕಲಿಕೆಗೆ ಪೂರಕವಾಗುವಂತಹ ವಸ್ತುಗಳನ್ನು ನೀಡುವ ಮೂಲಕ ಮಕ್ಕಳಲ್ಲಿ ವಿದ್ಯಾಭ್ಯಾಸದ ಕುರಿತು ಆಸಕ್ತಿಯನ್ನು ಹೆಚ್ಚಿಸಬಹುದು. ಇನ್ನೂ ಓದಬೇಕೆಂಬ ಹಂಬಲ ಅವರಲ್ಲಿ ಬರಬೇಕು. ಇಂತಹ ಚಟುವಟಿಕೆಗಳು ಅದಕ್ಕೆ ಸಹಾಯಕವಾಗಲಿ ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯಿನಿ ಲೀಲ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಜೀದ್, ಅಲವಿ, ಗಂಗಾಧರನ್, ಎ.ಕೆ.ಪಿ.ಎ. ಜಿಲ್ಲಾ ಸಮಿತಿ ಸದಸ್ಯರಾದ ಸಂಜೀವ ರೈ, ಚಂದ್ರಶೇಖರ, ದಿನೇಶ್ ಇನ್ಸೈಟ್ ಮಾತನಾಡಿದರು. ಮಕ್ಕಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು.