HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕುಸಿದು ಬಿದ್ದ ಕೋಟೆ ಬಸ್ಸು ತಂಗುನಿಲ್ದಾಣ ಬಿಜೆಪಿಯಿಂದ ತೆರವು
    ಪೆರ್ಲ: ಪೆರ್ಲ-ಸ್ವರ್ಗ ರಸ್ತೆಯ ಕೋಟೆ ಎಂಬಲ್ಲಿ 15 ವರ್ಷಗಳ ಹಿಂದೆ ಪಂಚಾಯಿತಿ ವತಿಯಿಂದ ನಿಮರ್ಾಣಗೊಂಡಿದ್ದ ಬಸ್ ತಂಗು ನಿಲ್ದಾಣ ಜೂ.13ರಂದು  ರಾತ್ರಿ ಬಿರುಸಿನ ಮಳೆಗೆ ನೆಲಸಮವಾಗಿದ್ದು ವಾಡರ್್ ಸದಸ್ಯೆ ರೂಪವಾಣಿ ಆರ್.ಭಟ್ ನೇತೃತ್ವದಲ್ಲಿ ಜೆಸಿಬಿ ಮೂಲಕ ತೆರವುಗೊಳಿಸಿ, ಕಣಿವೆ ನಿಮರ್ಿಸಿ ಮಳೆನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಲಾಯಿತು. ಪ್ರತಿನಿಧಿಗಳಾದ ಉದಯ ಚೆಟ್ಟಿಯಾರ್ ಬಜಕೂಡ್ಲು, ಸತೀಶ್ ಕುಲಾಲ್ ನಲ್ಕ, ಮಮತಾ ಯು.ರೈ, ಸ್ಥಳೀಯರಾದ ಕಿಶೋರ್ ಕೋಟೆ, ಮೋಹನ್, ರವಿ ಮತ್ತಿತರರು ಸಹಕರಿಸಿದರು.
   ಕಳೆದ ಸ್ವಾತಂತ್ರ್ಯೋತ್ಸವ  ದಿನದಂದು ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಬಿಜೆಪಿ ಪಂಚಾಯಿತಿ ಸಮಿತಿ ಹಾಗೂ ಪಕ್ಷದ ಜನಪ್ರತಿನಿಧಿಗಳು, ಕಾರ್ಯಕರ್ತರು ಪೆರ್ಲ ಪೇಟೆ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದರು.
   ಪೆರ್ಲ ಪೇಟೆಯಿಂದ ಎರಡು ಕಿ.ಮೀ. ದೂರದ ಕೋಟೆಯಲ್ಲಿ ಸ್ಥಳೀಯರ  ಆವಶ್ಯಕತೆ ಪರಿಗಣಿಸಿ ಕೋಟೆ ವಿಷ್ಣು ಭಟ್ ಸ್ಥಳದಾನ ನೀಡುವುದರೊಂದಿಗೆ 15 ವರ್ಷಗಳ ಮೊದಲು ಆಗಿನ ಪಂಚಾಯಿತಿ ಸದಸ್ಯೆ, ಹಾಲಿ ಜಿಲ್ಲಾ ಪಂಚಾಯಿತಿ ಸದಸ್ಯೆಯೂ ಆಗಿರುವ ಪುಷ್ಪಾ ಅಮೆಕ್ಕಳ ಅವರ ಪ್ರಯತ್ನದ ಫಲವಾಗಿ  40 ಸಾವಿರ ಖಚರ್ಿನಲ್ಲಿ  ನಿಮರ್ಾಣವಾದ ಬಸ್ಸು ತಂಗುನಿಲ್ದಾಣ ಕುಸಿತದಿಂದ ನಾಶವಾಗಿದ್ದು ಪೆರ್ಲ, ಕಾಸರಗೋಡು, ಬೆಟ್ಟಂಪಾಡಿ, ಪುತ್ತೂರು, ಅಡ್ಯನಡ್ಕ, ವಿಟ್ಲ ಭಾಗಗಳಿಗೆ ತೆರಳುವ ಶಾಲೆ,ಕಾಲೇಜು ವಿದ್ಯಾಥರ್ಿಗಳು, ಪ್ರಯಾಣಿಕರು ಮಾತ್ರವಲ್ಲದೆ ಹಾಲು,ದಿನ ಪತ್ರಿಕೆಗಳಿಗೆ ಕಾಯುವವರೇ ಮೊದಲಾಗಿ ಹಲವರಿಗೆ ಆಶ್ರಯ ತಾಣ ಇಲ್ಲವಾಗಿದೆ.
  ಶೀಘ್ರದಲ್ಲಿ ಕೋಟೆ ತಿರುವು ಭಾಗ ಅಗಲೀಕರಣದೊಂದಿಗೆ ನೂತನ  ಬಸ್ಸು ತಂಗುನಿಲ್ದಾಣ ನಿಮರ್ಾಣಕ್ಕೆ ಪಂಚಾಯಿತಿ ಆಡಳಿತ ಗಮನ ಹರಿಸಬೇಕಾಗಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries