HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಪಡ್ರೆ ಶಾಲೆಯಿಂದ ಜಿಲ್ಲಾಧಿಕಾರಿಗೆ ನೆರವು ಹಸ್ತಾಂತರ
     ಪೆರ್ಲ:ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕರು, ರಕ್ಷಕ-ಶಿಕ್ಷಕ ಸಂಘದ ನೇತೃತ್ವದಲ್ಲಿ ನೆರೆ ಪೀಡಿತರಿಗೆ ನೆರವು ನೀಡಲು ಸಂಗ್ರಹಿಸಲಾದ  ಆಹಾರ ಸಾಮಗ್ರಿ, ಬಟ್ಟೆ ಬರೆ ಹಾಗೂ 20 ಸಾವಿರ ರೂ. ಚೆಕ್ ಅನ್ನು  ಪ್ರಾಂಶುಪಾಲೆ ಗೀತಾ ಜಿ.ತೋಪಿಲ್, ಮುಖ್ಯ ಶಿಕ್ಷಕ ವಾಸುದೇವ ನಾಯಕ್, ಸಹ ಶಿಕ್ಷಕರ ನೇತೃತ್ವದಲ್ಲಿ  ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ
     ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಅವರ ಉಪಸ್ಥಿತಿಯಲ್ಲಿ ಸೋಮವಾರ ಹಸ್ತಾಂತರಿಸಲಾಯಿತು.
   ಪೆರ್ಲ, ಆರ್ಲಪದವು, ಬೆಟ್ಟಂಪಾಡಿ, ಪುತ್ತೂರು ಭಾಗಗಳಲ್ಲಿ ಸಂಗ್ರಹ ಕಾರ್ಯ ನಡೆಸಿದ್ದು ಪೆರ್ಲ ಮಮ್ಮಿ ಡ್ಯಾಡಿ ವಸ್ತ್ರಾಲಯದ ಮಾಲಕ ಜೆರಾಲ್ಡ್ ಡಿಸೋಜ ಐದು ಸಾವಿರ ನಗದು,  ಆರ್ಲಪದವು ಸ್ನೇಹ ಫ್ಯಾನಿ ಮಾಲಕ ವರದರಾಜ್ ನಾಯಕ್ ಆರು ಬೆಡ್ ಶೀಟ್,ಒಂದು ಸಾವಿರ ನಗದು, ಎಸ್ ಡಿ ಎಮ್ ಆಯುವರ್ೇದ ಔಷದಾಲಯದ ಮಾಲಕ ಸುಬ್ರಾಯ ಬಲ್ಯಾಯ 25 ಕಿ.ಗ್ರಾಂ.ಅಕ್ಕಿ, ಎರಡು ಸಾವಿರ ನಗದು, ಶಿವನಂದಿನಿ ಬೇಕರಿ ಮಾಲಕ ವಸಂತ ಬಲ್ಯಾಯ ಬೇಕರಿ ಸಾಮಗ್ರಿ, ಬೆಟ್ಟಂಪಾಡಿ ಲಕ್ಷ್ಮಿ ಕ್ಲಿನಿಕ್ ವೈದ್ಯ ಸುಬ್ರಹ್ಮಣ್ಯ ವಾಗ್ಲೆ 50 ಕಿ.ಗ್ರಾಂ ಅಕ್ಕಿ, ಶುಭಾ ಫೇನ್ಸಿ ಮಾಲಕ ದುಗರ್ಾಪ್ರಸಾದ್, ಹರಿ ಪ್ರಸಾದ್ ಸ್ಟುಡಿಯೋ ಮಾಲಕ ಹರಿಪ್ರಸಾದ್ ಬೇಕರಿ ಸಾಮಗ್ರಿ, ಪುತ್ತೂರು ಆರ್ ಎಚ್ ಸೆಂಟರ್ ಮಾಲಕ ಗೋಪಾಲ ಎಂ, ಪುತ್ತೂರು ಶಾಸಕ ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ಸುಮಾರು ಇಪ್ಪತ್ತು ಸಾವಿರ ಮೌಲ್ಯದ ಬಟ್ಟೆ ಬರೆ ನೀಡಿ ಸಹಕರಿಸಿದುದಾಗಿ ಅಧ್ಯಾಪಕರು ತಿಳಿಸಿದ್ದಾರೆ.

       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries