HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಅಯ್ಯಂಗಾಳಿ ಜನ್ಮದಿನೋತ್ಸವ : ಶಾಸಕ ಅಂಗಾರ ಉದ್ಘಾಟನೆ
                    ದೈವಪಾತ್ರಿ ಮತ್ತು ನಾಟಿ ವೈದ್ಯೆಗೆ ಸಮ್ಮಾನ
    ಬದಿಯಡ್ಕ: ಆದಿ ದಲಿತ್ ಮುನ್ನಡೆ ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ಅಯ್ಯಂಗಾಳಿ ಜನ್ಮದಿನೋತ್ಸವ ಆಚರಣೆ ಆ.28 ರಂದು ಬದಿಯಡ್ಕ ಗಣೇಶ ಮಂದಿರದಲ್ಲಿ ಬೆಳಿಗ್ಗೆ 10.30 ರಿಂದ ನಡೆಯಲಿದ್ದು, ಸುಳ್ಯ ಶಾಸಕ ಎಸ್.ಅಂಗಾರ ಉದ್ಘಾಟಿಸುವರು. ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಕುಂಬಳೆ ಅಧ್ಯಕ್ಷತೆ ವಹಿಸುವರು. ಕುಂಬಳೆ ಕುಂಞಿನಾಗರ ಕೊಟ್ಯದ ಪ್ರದಾನ ಕಮರ್ಿ ಹಾಗೂ ಪಾತ್ರಿ ಶ್ರೀನಿವಾಸ ಪಡುಮನೆ ಮತ್ತು ನಾಟಿ ವೈದ್ಯೆ ವಾಣಿನಗರದ ಸುಶೀಲ ಕುತ್ತಾಜೆ ಅವರನ್ನು ಸಮ್ಮಾನಿಸಲಾಗುವುದು. ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್, ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಒ.ಕೆ.ಪ್ರಭಾಕರನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
   ಐತ್ತಪ್ಪ ಅಮ್ಮಂಗೋಡು, ಚನಿಯ ಬಾಡೂರು, ಶಂಕರ ಡಿ.ದಬರ್ೆತ್ತಡ್ಕ, ಸದಾನಂದ, ಮಧು ಸಿ, ವಿನು ಕೆ.ವಿ, ಸೀತಾ ಬಂಬ್ರಾಣ, ಕಮಲಾಕ್ಷಿ ಕೊಟ್ಟೋಡಿ ಸಹಿತ ಜನಪ್ರತಿನಿಧಿಗಳು, ಸಾಮಾಜಿಕ ನೇತಾರರು ಶುಭಹಾರೈಸುವರು. ರಾಷ್ಟ್ರೀಯ ಕಬಡ್ಡಿ ಪಟು ಪ್ರದೀಪ್ ಮಲ್ಲ, ಭರತನಾಟ್ಯ ಕಲಾವಿದೆಯರಾದ ಶ್ವೇತಾ ಸೀತಾರಾಮ್, ಶ್ರೀವಿದ್ಯಾ ಸೀತಾರಾಮ್ ಅರ್ಲಡ್ಕ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಎಸ್.ಎಸ್.ಎಲ್.ಸಿ.ಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ನಮಿತ ಮತ್ತು ಸುಸ್ಮಿತಾ ಅವರನ್ನು ಅಭಿನಂದಿಸಲಾಗುವುದು. ಕಾರ್ಯಕ್ರಮದಲ್ಲಿ ಎಡಿಎಂಎಸ್ ರಾಜ್ಯಾಧ್ಯಕ್ಷ ಅಷ್ಟಪಾಲನ್ ಮತ್ತು ರಾಜ್ಯ ಪ್ರಧಾನ ಕಾರ್ಯದಶರ್ಿ ಸಿ.ಎಚ್.ಗೋಪಾಲ ಪ್ರಧಾನ ಭಾಷಣ ಮಾಡುವರು. ಮಾಧವ ಅರ್ಲಡ್ಕ ಮತ್ತು ಸುಂದರ ಕೆ.ಎಂ.ಕಾರ್ಯಕ್ರಮ ನಿರ್ವಹಿಸುವರು.
    ಸಮ್ಮಾನ ಸ್ವೀಕರಿಸುವ ಶ್ರೀನಿವಾಸ ಕೆ. ಪಡುಮನೆ ಅವರು ಮೊಗೇರ ಸಮುದಾಯದ ಹಿರಿಯ ವ್ಯಕ್ತಿ. ಕುಂಬಳೆ ಕುಂಞಿನಾಗರ ಕೊಟ್ಯ ಒಂದು ಕುಂದು ನಲುವತ್ತು ದೈವಸ್ಥಾನದ ಪ್ರಧಾನ ಕಮರ್ಿ ಹಾಗೂ ಪಾತ್ರಿ. ಪತ್ನಿ ದೇವಕಿ ಹಾಗೂ ಏಳು ಮಕ್ಕಳ ಸಂಸಾರ ಅವರದು. ಸುಶೀಲ ಕುತ್ತಾಜೆ ಕೂಡಾ ಮೊಗೇರ ಸಮಾಜದ ಹಿರಿಯ ವ್ಯಕ್ತಿಯಾಗಿದ್ದು, ಪರಂಪರಾಗತ ನಾಟಿ ವೈದ್ಯೆಯಾಗಿ ಪ್ರಸಿದ್ಧರು. ಅವರ ಪತಿ ಚುಕ್ರ ಕೂಲಿ ಕಾಮರ್ಿಕರು. ಈ ದಂಪತಿಗೆ ಐದು ಮಂದಿ ಮಕ್ಕಳು. ಸಭಾ ಕಾರ್ಯಕ್ರಮದ ಬಳಿಕ ಅಪರಾಹ್ನ 2 ರಿಂದ ಸಾಂಸ್ಕೃತಿ ವೈವಿಧ್ಯ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries