HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಮಂಗಲ್ಪಾಡಿ ಶಾಲೆಯ ಕನ್ನಡ ಸಮಸ್ಯೆ ಶೀಘ್ರ ಪರಿಹಾರಕ್ಕೆ ಎನ್.ಟಿ.ಯು. ಆಗ್ರಹ
     ಕಾಸರಗೋಡು : ಕನ್ನಡ ಮಾಧ್ಯಮ ತರಗತಿಗೆ ಕನ್ನಡ ಅಧ್ಯಾಪಕರನ್ನೇ ನೇಮಕಾತಿ ನಡೆಸಬೇಕೆಂಬ 2008ರ ಕೇರಳ ಸರಕಾರದ ಆದೇಶವನ್ನು ಮೀರಿ ಮಂಗಲ್ಪಾಡಿ ಹೈಸ್ಕೂಲಿನ ಕನ್ನಡ ವಿಭಾಗದ ಗಣಿತ ವಿಷಯದ ಶಿಕ್ಷಕರ ಹುದ್ದೆಗೆ ಮಲಯಾಳಿ ಅಧ್ಯಾಪಕರ ನೇಮಕಾತಿ ಮಾಡಿದ ಕಾಸರಗೋಡು ಜಿಲ್ಲೆಯ ವಿದ್ಯಾಭ್ಯಾಸ ಉಪನಿದರ್ೇಶಕರ ನಿಲುವನ್ನು ದೇಶೀಯ ಅಧ್ಯಾಪಕ ಪರಿಷತ್ (ಎನ್.ಟಿ.ಯು.) ಜಿಲ್ಲಾ ಸಮಿತಿ ಪ್ರಬಲವಾಗಿ ಖಂಡಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ ಸಾಕಷ್ಟು ಅರ್ಹ ಕನ್ನಡಿಗ ನಿರುದ್ಯೋಗಿ ಶಿಕ್ಷಕ ಅಭ್ಯಥರ್ಿಗಳಿದ್ದು, ಅನ್ಯ ಜಿಲ್ಲೆಯ ಕನ್ನಡ ತಿಳಿಯದ ವ್ಯಕ್ತಿಯ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ಸಂದೇಹ ವ್ಯಕ್ತಪಡಿಸಿದೆ.
ಅಭ್ಯಥರ್ಿಯ ಸಂದರ್ಶನ ನಡೆಸಿ, ಲೋಕಸೇವಾ ಆಯೋಗಕ್ಕೆ ಶಿಫಾರಸು ಮಾಡಿದ ಕನ್ನಡ ವಿದ್ವಾಂಸರ ನಿಲುವು, ಕನ್ನಡ ವಿರೋಧಿ ನಡೆಯು ಖಂಡನೀಯವಾಗಿದೆ. ಶಿಕ್ಷಣ ಇಲಾಖೆಯು ಈ ಅನ್ಯಾಯದ ನೇಮಕಾತಿಯನ್ನು ಹಿಂಪಡೆದು, ಅರ್ಹ ಕನ್ನಡ ಗಣಿತ ಶಿಕ್ಷಕರನ್ನು ನೇಮಕಾತಿಗೊಳಿಸಬೇಕೆಂದು ಎನ್.ಟಿ.ಯು. ಒತ್ತಾಯಿಸಿದೆ. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಕೆ.ಪ್ರಭಾಕರನ್ ನಾಯರ್ ಈ ಬಗ್ಗೆ ಶಿಕ್ಷಣ ಉಪನಿದರ್ೇಶಕರಿಗೆ ಮನವಿ ಸಲ್ಲಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries