HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕುಂಟಾರಿನಲ್ಲಿ ಶ್ರೀಕೃಷ್ಣ ಲೀಲೋತ್ಸವ
     ಮುಳ್ಳೇರಿಯ: ಕುಂಟಾರು ಶ್ರೀಕೃಷ್ಣ ಲೀಲೋತ್ಸವ ಸಮಿತಿ ಆಶ್ರಯದಲ್ಲಿ 17ನೇ ವರ್ಷದ ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮಗಳು ಭಾನುವಾರ ಕುಂಟಾರು ಶ್ರೀ ಮಹಾವಿಷ್ಣುಮೂತರ್ಿ ಕ್ಷೇತ್ರ ಪರಿಸರದಲ್ಲಿ ವಿವಿಧ ಧಾಮರ್ಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
     ಬೆಳಿಗ್ಗೆ  ಚಂದ್ರಾವತಿ ಕುಂಟಾರು ಇವರಿಂದ ಭಾಗವತ ಪ್ರವಚನ ನಡೆಯಿತು. ಬ್ರಹ್ಮಶ್ರೀ ವಾಸುದೇವ ತಂತ್ರಿಗಳು ದೀಪಜ್ವಲನೆಯ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಬಳಿಕ ವಿವಿಧ ಸ್ಪಧರ್ೆಗಳು ನಡೆಯಿತು. ಸಮಾರೋಪ ಸಭೆಯಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಆಶೀರ್ವಚನ ನೀಡಿ ಮಾನವ ಜೀವನದ ಸಂತೋಷ, ಸಾರ್ಥಕ್ಯ ಇಂತಹ ಉತ್ಸವಗಳಲ್ಲಿ ಭಾಗಿಗಳಾಗುವುದರ ಮೂಲಕ ಸಾಧ್ಯ. ಹಬ್ಬಗಳು ನಮ್ಮ ಒಗ್ಗಟ್ಟಿನ ಪ್ರತೀಕಗಳಾಗಬೇಕು. ನೆರೆ ಪೀಡಿತರ ಕಣ್ಣೀರೊರೆಸುವಲ್ಲಿ ನಾವೂ ಭಾಗಿಗಳಾಗಬೇಕು, ಅವರಿಗಾಗಿ ಹಬ್ಬಗಳ ವಿಜೃಂಭಣೆ ತ್ಯಾಗ ಮಾದರಿ ಎಂದು ಹೇಳಿದರು. ಲೀಲೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಭಟ್ ಅಧ್ಯಕ್ಷತೆ ವಹಿಸಿ ಹಬ್ಬಗಳ ಆಚರಣೆಯ ಮೂಲಕ ಧರ್ಮ ಜಾಗೃತಿಯ ಸಂದೇಶ ನಮಗೆ ಲಭಿಸುತ್ತದೆ ಎಂದು ಹೇಳಿದರು. ಕಾರಡ್ಕ ಪಂಚಾಯಿತಿ ಸದಸ್ಯೆ ಶ್ರೀವಿದ್ಯಾ ಉಪಸ್ಥಿತರಿದರು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
   ಯತೀಶ್.ಎಚ್ ಸ್ವಾಗತಿಸಿದರು.  ಪ್ರಕಾಶ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಭಟ್ ವಂದಿಸಿದರು. ಶ್ರೀಕೃಷ್ಣ ವೇಷಧಾರಿ ಬಾಲಕರ ಶೋಭಾಯಾತ್ರೆಯನ್ನು  ಕೇರಳ ಜನತೆಯ ನೆರೆ ಪೀಡಿತ ದುಸ್ಥಿತಿಯ ಕಾರಣ ನಡೆಸಲಿಲ್ಲ.
     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries