ನಾಯ್ಕಾಪಿನಲ್ಲಿ ಕೃಷ್ಣಜಯಂತಿ-ಮೊಸರುಕುಡಿಕೆ ಉತ್ಸವ
ಕುಂಬಳೆ: ನಾಯ್ಕಾಪು ಶ್ರೀ ಶಾಸ್ತಾ ಮಿತ್ರ ಸಂಗಮದ ಆಶ್ರಯದಲ್ಲಿ 25ನೇ ವರ್ಷದ ಶ್ರೀಕೃಷ್ಣ ಜಯಂತಿ ಸೆಪ್ಟೆಂಬರ್ 2ರಂದು ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಆ ದಿನ ಬೆಳಿಗ್ಗೆ 9ರಿಂದ ಮಕ್ಕಳಿಗೆ ಮತ್ತು ಹಿರಿಯರಿಗಾಗಿ ಮುದ್ದುಕೃಷ್ಣ ವೇಷ, ಅದೃಷ್ಟ ವೃತ್ತ, ಭಕ್ತಿಗೀತೆ, ಮಡಕೆ ಒಡೆಯುವುದು ಸ್ಪಧರ್ೆಗಳು ನಡೆಲಿರುವುವು. ಅಪರಾಹ್ನ 2ರಿಂದ ಸಾರ್ವಜನಿಕರಿಗಾಗಿ ಮೊಸರು ಕುಡಿಕೆ ಕಂಬ ಏರುವ ಸ್ಪಧರ್ೆಯನ್ನು ಏರ್ಪಡಿಸಲಾಗಿದೆ. ಸಂಜೆ 06.30ರಿಂದ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್, ಸದಾಶಿವ ಗಟ್ಟಿ ನಾಯ್ಕಾಪು, ಹಿರಿಯ ಭಜನಾ ಕಲಾವಿದ ಪದ್ಮನಾಭ ಚೆಟ್ಟಿಯಾರ್ ಹಾಗೂ ಹಿರಿಯ ಮಹಿಳಾ ಯಕ್ಷಗಾನ ಕಲಾವಿದೆ ವಸುಂಧರಾ ಹರೀಶ್ ಅವರನ್ನು ಸನ್ಮಾನಿಸಲಾಗುವುದು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಸುಂದೋಪಸುಂದ-ಕುಶಲವ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. ಭಾಗವತರು ಪಟ್ಲ ಸತೀಶ ಶೆಟ್ಟಿ ಮತ್ತು ಶ್ರೀನಿವಾಸ ಬಳ್ಳಮಂಜ ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ್ ಐಲ, ನಿಶ್ವಿತ್ ಜೋಗಿ ಹಾಗೂ ಮುಮ್ಮೇಳದಲ್ಲಿ ಪಾತ್ರಧಾರಿಗಳಾಗಿ ಮಧುರಾಜ್ ಎಡನೀರು, ಶ್ರೀಗಿರಿ ಅನಂತಪುರ, ಕಿಶನ್ ಅಗ್ಗಿತ್ತಾಯ, ರಾಧಾಕೃಷ್ಣ ನಾವಡ ಮಧೂರು, ಸಂತೋಷ್ ಕುಮಾರ್ ಮಾನ್ಯ, ಗುರುರಾಜ ಹೊಳ್ಳ ಬಾಯಾರು, ಅಕ್ಷಯ್ ಕುಮಾರ್ ಮಾನರ್ಾಡು, ರಾಕೇಶ್ ರೈ ಅಡ್ಕ, ಅಜಿತ್ ಪುತ್ತಿಗೆ, ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ, ಮನೀಶ್ ಎಡನೀರು, ದಿನೇಶ್ ಶೆಟ್ಟಿಗಾರ್ ಕೋಡಪದವು, ಲೋಕೇಶ್ ಮುಚ್ಚೂರು, ಗುರುತೇಜ, ಶಶಿಧರ ಕುಲಾಲ್ ಕನ್ಯಾನ, ಸಚಿನ್, ಕಿಶೋರ್ ಕೂಡ್ಲು, ಕುಂಬಳೆ ಶ್ರೀಧರ ರಾವ್ ಹಾಗೂ ಮುರಳೀಧರ ಯಾದವ್ ನಾಯ್ಕಾಪು ಭಾಗವಹಿಸುವರು.
ಕುಂಬಳೆ: ನಾಯ್ಕಾಪು ಶ್ರೀ ಶಾಸ್ತಾ ಮಿತ್ರ ಸಂಗಮದ ಆಶ್ರಯದಲ್ಲಿ 25ನೇ ವರ್ಷದ ಶ್ರೀಕೃಷ್ಣ ಜಯಂತಿ ಸೆಪ್ಟೆಂಬರ್ 2ರಂದು ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಆ ದಿನ ಬೆಳಿಗ್ಗೆ 9ರಿಂದ ಮಕ್ಕಳಿಗೆ ಮತ್ತು ಹಿರಿಯರಿಗಾಗಿ ಮುದ್ದುಕೃಷ್ಣ ವೇಷ, ಅದೃಷ್ಟ ವೃತ್ತ, ಭಕ್ತಿಗೀತೆ, ಮಡಕೆ ಒಡೆಯುವುದು ಸ್ಪಧರ್ೆಗಳು ನಡೆಲಿರುವುವು. ಅಪರಾಹ್ನ 2ರಿಂದ ಸಾರ್ವಜನಿಕರಿಗಾಗಿ ಮೊಸರು ಕುಡಿಕೆ ಕಂಬ ಏರುವ ಸ್ಪಧರ್ೆಯನ್ನು ಏರ್ಪಡಿಸಲಾಗಿದೆ. ಸಂಜೆ 06.30ರಿಂದ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್, ಸದಾಶಿವ ಗಟ್ಟಿ ನಾಯ್ಕಾಪು, ಹಿರಿಯ ಭಜನಾ ಕಲಾವಿದ ಪದ್ಮನಾಭ ಚೆಟ್ಟಿಯಾರ್ ಹಾಗೂ ಹಿರಿಯ ಮಹಿಳಾ ಯಕ್ಷಗಾನ ಕಲಾವಿದೆ ವಸುಂಧರಾ ಹರೀಶ್ ಅವರನ್ನು ಸನ್ಮಾನಿಸಲಾಗುವುದು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಸುಂದೋಪಸುಂದ-ಕುಶಲವ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. ಭಾಗವತರು ಪಟ್ಲ ಸತೀಶ ಶೆಟ್ಟಿ ಮತ್ತು ಶ್ರೀನಿವಾಸ ಬಳ್ಳಮಂಜ ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ್ ಐಲ, ನಿಶ್ವಿತ್ ಜೋಗಿ ಹಾಗೂ ಮುಮ್ಮೇಳದಲ್ಲಿ ಪಾತ್ರಧಾರಿಗಳಾಗಿ ಮಧುರಾಜ್ ಎಡನೀರು, ಶ್ರೀಗಿರಿ ಅನಂತಪುರ, ಕಿಶನ್ ಅಗ್ಗಿತ್ತಾಯ, ರಾಧಾಕೃಷ್ಣ ನಾವಡ ಮಧೂರು, ಸಂತೋಷ್ ಕುಮಾರ್ ಮಾನ್ಯ, ಗುರುರಾಜ ಹೊಳ್ಳ ಬಾಯಾರು, ಅಕ್ಷಯ್ ಕುಮಾರ್ ಮಾನರ್ಾಡು, ರಾಕೇಶ್ ರೈ ಅಡ್ಕ, ಅಜಿತ್ ಪುತ್ತಿಗೆ, ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ, ಮನೀಶ್ ಎಡನೀರು, ದಿನೇಶ್ ಶೆಟ್ಟಿಗಾರ್ ಕೋಡಪದವು, ಲೋಕೇಶ್ ಮುಚ್ಚೂರು, ಗುರುತೇಜ, ಶಶಿಧರ ಕುಲಾಲ್ ಕನ್ಯಾನ, ಸಚಿನ್, ಕಿಶೋರ್ ಕೂಡ್ಲು, ಕುಂಬಳೆ ಶ್ರೀಧರ ರಾವ್ ಹಾಗೂ ಮುರಳೀಧರ ಯಾದವ್ ನಾಯ್ಕಾಪು ಭಾಗವಹಿಸುವರು.