HEALTH TIPS

No title

                   ಯುವ ಬರಹಗಾರರ ಒಕ್ಕೂಟದ ಜಿಲ್ಲಾ ಘಟಕ ಉದ್ಘಾಟನೆ ಸೆ.8 ರಮದು
                        ಆಮಂತ್ರಣ ಪತ್ರಿಕೆ ಬಿಡುಗಡೆ     
   ಬದಿಯಡ್ಕ: ಕನರ್ಾಟಕ ರಾಜ್ಯ ಯುವ ಬರಹಗಾರರ ಒಕ್ಕೂಟ ಬೆಂಗಳೂರಿನ ಕಾಸರಗೋಡು ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಕನ್ನಡ ಕವಿಗೋಷ್ಠಿ ಸೆ. 8 ರಂದು ಶನಿವಾರ ಅಪರಾಹ್ನ 2 ರಿಂದ ಬದಿಯಡ್ಕದ ಪೆರಡಾಲ ನವಜೀವನ ಫ್ರೌಢಶಾಲೆಯಲ್ಲಿ ನಡೆಯಲಿದೆ.
   ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ನಿವೃತ್ತ ಪ್ರಾಧ್ಯಾಪಕ, ಪತ್ರಕರ್ತ ವಿ.ಬಿ.ಅತರ್ಿಕಜೆ ಉದ್ಘಾಟಿಸುವರು. ಯುವ ಬರಹಗಾರರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಹೂಹಳ್ಳಿ ನಾಗರಾಜ್, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ಧಾಮರ್ಿಕ ಲೇಖಕಿ ಸುಗುಣಾ ಬಿ.ತಂತ್ರಿ ಉಬ್ರಂಗಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
   ಉದ್ಘಾಟನಾ ಸಮಾರಂಭದ ಬಳಿಕ ಕನ್ನಡ ಕವಿಗೋಷ್ಠಿ ನಡೆಯಲಿದ್ದು, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಉದ್ಘಾಟಿಸುವರು. ಶ್ರೀಕೃಷ್ಣಯ್ಯ ಅನಂತಪುರ, ದೇವರಾಜ್ ಆಚಾರ್ಯ ಕುಂಬಳೆ, ಶ್ವೇತಾ ಕಜೆ, ಲತಾ ಆಚಾರ್ಯ ಬನಾರಿ, ಕೆ.ನರಸಿಂಹ ಭಟ್ ಏತಡ್ಕ, ರಂಗಾ ಶಮರ್ಾ ಉಪ್ಪಂಗಳ, ಶ್ರೀಧರ ನಾಯಕ್ ಕುಕ್ಕಿಲ, ದಯಾನಂದ ರೈ ಕಳ್ವಾಜೆ, ಆನಂದ ರೈ ಅಡ್ಕಸ್ಥಳ, ಮಣಿರಾಜ್ ವಾಂತಿಚ್ಚಾಲ್, ಹರೀಶ್ ಪೆರ್ಲ, ಸುಭಾಶ್ಚಂದ್ರ ಪೆರ್ಲ, ಕೆ.ಎ.ಎಂ.ಅನ್ಸಾರಿ, ಜ್ಯೋಸ್ಸ್ನಾ ಎಂ.ಕಡಂದೇಲು, ಶಾರದಾ ಎಸ್.ಭಟ್ ಕಾಡಮನೆ, ಶಶಿಕಲಾ ಕುಂಬಳೆ, ಸುಶೀಲಾ ಪದ್ಯಾಣ, ಸಂದೀಪ್ ಬದಿಯಡ್ಕ, ಗಣೇಶ್ ಪೈ ಬದಿಯಡ್ಕ, ಪರಿಣಿತ ಎನರ್ಾಕುಳಂ ಸ್ವರಚಿತ ಕವನಗಳನ್ನು ವಾಚಿಸುವರು.
   ಕಾರ್ಯಕ್ರಮದ ರೂಪರೇಖೆ ತಯಾರಿಸಲು ಶುಕ್ರವಾರ ಬದಿಯಡ್ಕದಲ್ಲಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು. ಜಿಲ್ಲಾ ಘಟಕಾಧ್ಯಕ್ಷೆ ಪ್ರಭಾವತಿ ಕೆದಿಲಾಯ ಅವರು ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಮಧೂರು ಅವರಿಗೆ ಆಮಂತ್ರಣ ಪತ್ರಿಕೆ ಹಸ್ತಾಂತರಿಸಿದರು. ಶ್ಯಾಮಲಾ ರವಿರಾಜ್ ಕುಂಬಳೆ, ವಿರಾಜ್ ಅಡೂರು, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries