HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                          `ರಂಗಸಿರಿ ದಸರಾ ಯಕ್ಷ ಪಯಣ'
ಬದಿಯಡ್ಕ: ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ರಂಗಸಿರಿ ದಸರಾ ಯಕ್ಷ ಪಯಣ ಅಣಂಗೂರಿನ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆಯಿತು.  ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿದರ್ೇಶನದಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾಥರ್ಿಗಳಿಂದ `ಏಕಾದಶೀ ದೇವಿಮಹಾತ್ಮೆ' ಯಕ್ಷಗಾನ ಪ್ರದರ್ಶನಗೊಂಡಿತು. ವಿದ್ಯಾ ಕುಂಟಿಕಾನಮಠ(ದೇವೇಂದ್ರ), ಉಪಾಸನಾ ಪಂಜರಿಕೆ(ಅಗ್ನಿ),  ಅಭಿಜ್ಞ ಭಟ್(ವಾಯು), ಗುರುಪ್ರಸಾದ್ ಮುಳಿಯಾರು(ದೇವೇಂದ್ರ ದೂತ), ಸುಪ್ರೀತ ಸುಧೀರ್(ಮೇಘಮುಖಿ), ಶ್ರೀಹರಿ ಮವ್ವಾರು(ರಾಕ್ಷಸ ದೂತ), ರಾಕೇಶ ಮವ್ವಾರು ಹಾಗೂ ರಾಜೇಶ ಕುಂಪಲ(ಮುರಾಸುರ), ನಂದಕಿಶೋರ  ಹಾಗೂ ಮನೀಶ್(ರಾಕ್ಷಸ ಬಲಗಳು), ಆಕಾಶ್(ಗರುಡ), ಶ್ರೀಹರ್ಷ ಪ್ರಸಾದ್ ಪುತ್ತಿಗೆ(ವಿಷ್ಣು), ಶ್ರೀಶ ಪಂಜಿತ್ತಡ್ಕ(ಶ್ರೀದೇವಿ) ಪಾತ್ರಗಳಿಂದ ಗಮನ ಸೆಳೆದರು.  ಭಾಗವತಿಕೆಯಲ್ಲಿ ಪ್ರದೀಪ ಕುಮಾರ್ ಕಂಬಳಪದವು, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಮದ್ದಳೆಯಲ್ಲಿ ಮುರಳಿ ಮಾಧವ ಮಧೂರು, ಚಕ್ರತಾಳದಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಸಹಕರಿಸಿದರು. ನೇಪಥ್ಯದಲ್ಲಿ ಕೇಶವ ಆಚಾರ್ಯ, ಮೋಹನ ಕೊಕ್ಕಣರ್ೆ, ರಾಜೇಶ ಮತ್ತು ಗಿರೀಶ್ ಸಹಕಾರ ನೀಡಿದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries