HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಏತಡ್ಕ ಶಾಲೆಯಲ್ಲಿ ಶಾರದಾ ಪೂಜೆ ಮತ್ತು ತಾಳಮದ್ದಳೆ
   ಬದಿಯಡ್ಕ:  ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜಯ ದಶಮಿಯಂದು ಶಾರದಾ ಪೂಜೆ ಮತ್ತು ಶಾಲಾ ವಿದ್ಯಾಥರ್ಿಗಳಿಂದ  ತಾಳಮದ್ದಳೆ ಕಾರ್ಯಕ್ರಮವು ಜರಗಿತು.  12ನೆಯ ವರ್ಷದ ವಿದ್ಯಾಥರ್ಿ ತಾಳಮದ್ದಳೆಯಲ್ಲಿ ಅತಿಕಾಯ ಮೋಕ್ಷ ಪ್ರಸಂಗದ ಪ್ರಸ್ತುತಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವೆಂಕಟ್ರಾಜ ಕುಂಟಿಕಾನ, ಚೆಂಡೆ,ಮದ್ದಳೆಯಲ್ಲಿ ಈಶ್ವರ ಮಲ್ಲ,ಬಾಲಕೃಷ್ಣ ಆಚೆಗೋಳಿ, ವಿಷ್ಣು ಕಿರಣ ಸಹಕರಿಸಿದರು.ಪಾತ್ರ ವರ್ಗದಲ್ಲಿ ಅತಿಕಾಯನಾಗಿ ಅನುಷಾನಾಥ್ ಮತ್ತು ಅರ್ಚನಾ,ರಾವಣನಾಗಿ ಪೂಜಾಶ್ರೀ,ರಾಮನಾಗಿ ರಾಜಲಕ್ಷ್ಮಿ, ವಿಭೀಷಣನಾಗಿ ಗಗನ್,ಲಕ್ಷ್ಮಣನಾಗಿ ಪ್ರಣೀತ್ ಶರ್ಮ ತಮ್ಮ ಪಾತ್ರಗಳಿಗೆ ಜೀವಂತಿಕೆಯನ್ನು ತುಂಬಿದರು.ಏತಡ್ಕ ಶಾಲೆಯ ಅಧ್ಯಾಪಕ ಹಾಗೂ ಹವ್ಯಾಸಿ ಅರ್ಥಧಾರಿ ರಾಜಾರಾಮ ಕೆ.ವಿ ಮಕ್ಕಳಿಗೆ ತರಬೇತಿಯನ್ನು ನೀಡಿದ್ದರು.
  ಪಳ್ಳದಮೂಲೆ ಲಕ್ಷ್ಮೀಶ ಕಡಂಬಳಿತ್ತಾಯ ಪೂಜಾ ಕಾರ್ಯವನ್ನು ನೆರವೇರಿಸಿದರು.ಬಳಿಕ ಅಕ್ಷರಾಭ್ಯಾಸ ನಡೆಯಿತು.ರಾಜಾರಾಮ ಕೆ.ವಿ ಸ್ವಾಗತಿಸಿ, ಅಧ್ಯಾಪಕ ಸುಧೀರ್ ಕೃಷ್ಣ ಪಿ.ಎಲ್ ವಂದಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries