HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಹೊಸಂಗಡಿಯಲ್ಲಿ ಪ್ರತಿಭಟನಾ ಧರಣಿ
 ಮಂಜೇಶ್ವರ: ಹಿಂದುಗಳ ಆಚಾರ, ಧಾಮರ್ಿಕತೆಯಲ್ಲಿ ನಾಸ್ತಿಕ ಕಮ್ಯುನಿಸ್ಟರ್ ಮಾಡುತ್ತಿರುವ ದಬ್ಬಾಳಿಕೆಯು ಅವರ ನಾಶದ ಮುನ್ಸೂಚನೆ. ಆದೇಶದ ಮೇರೆಗೆ ಪೊಲೀಸ್ ಬಲ ಪ್ರಯೋಗಿಸಿ ಹಿಂದುಗಳನ್ನು ದಮನಿಸಲು ನೋಡಿದರೆ  ಖಂಡಿತವಾಗಿಯೂ ಎಚ್ಚೆತ್ತ ಹಿಂದೂ ಸಮಾಜ ತಕ್ಕ ಸಮಯದಲ್ಲಿ ತಿರುಗೇಟು ನೀಡಲಿದೆ ಎಂದು ಆದಶರ್್ ಬಿಎಂ ಹೇಳಿದರು.
    ಅಯ್ಯಪ್ಪ ಕರ್ಮ ಸಮಿತಿ ನೇತೃತ್ವದಲ್ಲಿ ಹೊಸಂಗಡಿ ಅಯ್ಯಪ್ಪ ಕ್ಷೇತ್ರದಿಂದ ಮಂಜೇಶ್ವರ ಪೋಲಿಸ್ ಠಾಣೆಗೆ ಭಾನುವಾರ ನಡೆದ ಪ್ರತಿಭಟನಾ ಧರಣಿಯಲ್ಲಿ ಅವರು ಮಾತನಾಡಿದರು.
  ನಾಸ್ತಿಕ ಕಮ್ಯುನಿಸ್ಟರು ತಮ್ಮ ಅಸ್ತಿತ್ವ ಉಳಿಸಲು ಇಂದು ದೇವರ ಮೊರೆ ಹೋಗುತ್ತಿದ್ದಾರೆ. ಅದು ಅವರ ಗತಿಗೇಡಿನ ಪರಮಾವಧಿ ಎಂದರು.
    ಮಾಡ ಕ್ಷೇತ್ರದ ಗುರುಸ್ವಾಮಿ  ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ  ಹರಿಶ್ಚಂದ್ರ ಎಂ., ಲೋಕೇಶ್ ಜೋಡುಕಲ್ಲು ಉಪಸ್ಥಿತರಿದ್ದು ಪ್ರಾಸ್ತಾವಿಕ ಮಾತುಗಳನಾಡಿ ಸರಕಾರದ ಹಾಗೂ ಪೊಲೀಸ್ ಇಲಾಖೆಯ ಹಿಂದೂ ವಿರೋಧಿ ನೀತಿ ಖಂಡಿಸಿದರು. ಮುಖಂಡರಾದ ಪದ್ಮನಾಭ ಕಡಪ್ಪರ, ಯಾದವ ಬಡಾಜೆ ,ಭರತ್ ಕನಿಲ,ಉದಯ ಪಾವಳ, ಧೂಮಪ್ಪ ಶೆಟ್ಟಿ ವಕರ್ಾಡಿ, ಪ್ರಸಾದ್ ರೈ ಕಯ್ಯಾರು, ಸುಬ್ರಹ್ಮಣ್ಯ ಭಟ್ ಬಾಯರು, ಅವಿನಾಶ್ ಮಂಜೇಶ್ವರ, ಚಂದ್ರಶೇಖರ್ ವಕರ್ಾಡಿ, ಜನಾರ್ದನ ಮಾಜಿಬೈಲ್, ಪಿ ಎಂ ಅಬ್ದುಲ್ಲ,  ಯಸ್ಪಲ್, ಎ.ಕೆ ಕಯ್ಯಾರ್, ಕಿಶೋರ್ ಭಗವತಿ ಮೆರವಣಿಗೆ ನೇತೃತ್ವ ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries