HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ವಿಮಾ ಯೋಜನೆಯ ಅಜರ್ಿ ನಮೂನೆ ಕನ್ನಡದಲ್ಲಿ ವಿತರಿಸಲು ಆಗ್ರಹ
    ಬದಿಯಡ್ಕ: ನಿವೃತ್ತ ನೌಕರರಿಗಿರುವ ವಿಮಾ ಯೋಜನೆಯ ಅಜರ್ಿ ನಮೂನೆಯನ್ನು ಕನ್ನಡದಲ್ಲಿ ವಿತರಿಸಬೇಕು ಎಂದು ಕೇರಳ ರಾಜ್ಯ ಪಿಂಚಣಿದಾರರ ಸಂಘ್ದ ಮಹಾಸಭೆಯಲ್ಲಿ ಸಂಬಂಧಪಟ್ಟವರನ್ನು ಒತ್ತಾಯಿಸಲಾಯಿತು.
   ಬದಿಯಡ್ಕ ವಲಯ ಪಿಂಚಣಿದಾರರ ಮಹಾಸಭೆಯು ಬದಿಯಡ್ಕ ಸೀತಾರಾಮ ಸಭಾಂಗಣದಲ್ಲಿ ಗುರುವಾರ ನಡೆಯಿತು. ಸಂಘದ ಅಧ್ಯಕ್ಷ ಕೇಶವ ಪ್ರಸಾದ ಕುಳಮರ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನವಂಬರ್ ತಿಂಗಳಿನಲ್ಲಿ ನಡೆಯುವ ರಾಜ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ತೀಮರ್ಾನಿಸಲಾಯಿತು.
   ಕೆ.ಎಸ್.ಪಿ.ಎಸ್. ಕಾಸರಗೋಡು ಜಿಲ್ಲಾ ಅಧ್ಯಕ್ಷ ಈಶ್ವರ ರಾವ್ ಪಿ. ಉದ್ಘಾಟಿಸಿ ಮಾತನಾಡಿ, ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸದಸ್ಯರು ಒಗ್ಗಟ್ಟಾಗಿ ಇನ್ನೂ ಹೆಚ್ಚಿನ ಸದಸ್ಯರನ್ನು ಸೇರಿಸಬೇಕು ಎಂದರು. ಕೆ.ಎಸ್.ಪಿ.ಎಸ್. ಜಿಲ್ಲಾ ಸಮಿತಿ ಸದಸ್ಯ ಶಿವಶಂಕರ ಭಟ್ ಗುಣಾಜೆ, ಈಶ್ವರ ಮಾಸ್ತರ್ ಪೆರಡಾಲ, ವೆಂಕಟೇಶ್ವರ ಭಟ್ ಮೊಳೆಯಾರು, ಚೆನ್ನಯ್ಯ ಪೂಜಾರಿ ಸಲಹೆ ಸೂಚನೆಗಳನ್ನು ನೀಡಿದರು.
  ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ಆರಿಸಿಲಾಯಿತು. ಅಧ್ಯಕ್ಷರಾಗಿ ಎಂ.ನಾರಾಯಣ ಭಟ್ ಮೈರ್ಕಳ, ಉಪಾಧ್ಯಕ್ಷರಾಗಿ ಚೆನ್ನಯ್ಯ ಪೂಜಾರಿ, ಕಾರ್ಯದಶರ್ಿಯಾಗಿ ಕೇಶವ ಪ್ರಸಾದ ಕುಳಮರ್ವ, ಜೊತೆ ಕಾರ್ಯದಶರ್ಿಯಾಗಿ ಈಶ್ವರ ಮಾಸ್ತರ್ ಪೆರಡಾಲ ಹಾಗೂ 9 ಮಂದಿ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
   ಉದನೇಶ ವೀರ ಕಿಳಿಂಗಾರು ಸ್ವಾಗತಿಸಿ, ಗಣಪತಿ ಪ್ರಸಾದ ಕುಳಮರ್ವ ವಂದಿಸಿದರು. ವಿಶಾಲಾಕ್ಷಿ ಹಾಗೂ ಜಯಶ್ರೀ ಪ್ರಾರ್ಥನೆಯನ್ನು ಹಾಡಿದರು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries