HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಕ್ರೀಡೆಗಳ ಮೂಲಕ ಶಾರೀರಿಕ ವಿಕಾಸ- ವಿ.ಪಿ. ಅಬ್ದುಲ್ ಖಾದರ್ ಹಾಜಿ
    ಕುಂಬಳೆ: ಶಾಲೆಗೆ ಬರುವ ಮಕ್ಕಳಿಗೆ ಪಠ್ಯ ಚಟುವಟಿಕೆಗಳಷ್ಟೇ ಪ್ರಾಧಾನ್ಯವನ್ನು ಕ್ರೀಡಾಚಟುವಟಿಕೆಗಳಿಗೂ ನೀಡಬೇಕು ಎನ್ನುವುದು ಸರಕಾರದ ನೀತಿ. ಆ ಮೂಲಕ ಮಕ್ಕಳ ಶಾರೀರಿಕ ವಿಕಾಸವನ್ನು ಉದ್ದೇಶಿಸಲಾಗಿದೆ. ಕ್ರೀಡೆಯು ಪಠ್ಯ ವಿಷಯಗಳ ಜ್ಞಾನದೊಂದಿಗೆ ಶಾರೀರಿಕ ಹಾಗೂ ಮಾನಸಿಕ ವಿಕಾಸಕ್ಕೆ ಬಹಳಷ್ಟು ಪ್ರಯೋಜನಕಾರಿ ಅಂಶಗಳನ್ನು ಒದಗಿಸುತ್ತದೆ ಎಂದು ಕುಂಬಳೆ ಗ್ರಾಮ ಪಂಚಾಯತು ಸದಸ್ಯ ವಿ.ಪಿ. ಅಬ್ದುಲ್ ಖಾದರ್ ಹಾಜಿ ನುಡಿದರು.
   ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯ 2018-19ನೇ ಶೈಕ್ಷಣಿಕ ವರ್ಷದ ಕ್ರೀಡಾಕೂಟವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
   ಮುಖ್ಯೋಪಾಧ್ಯಾಯ ಗುರುಮೂತರ್ಿ ಅಧ್ಯಕ್ಷತೆ ವಹಿಸಿದರು.ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಬಿಎ ಪೇರಾಲು ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರವನ್ನೂ ವೈಯಕ್ತಿಕ ಚಾಂಪ್ಯನ್ ಪ್ರಶಸ್ತಿ ಫಲಕಗಳನ್ನೂ ವಿತರಿಸಿದರು. ಪ್ರಸೀನ ಟೀಚರ್ ಸ್ವಾಗತಿಸಿ, ಅಂಬಿಕ ಟೀಚರ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries