HEALTH TIPS

ಕೊಂಡೆವೂರಿನ ಸೋಮಯಾಗ : ಮಣ್ಣಿನ ಕುಂಭ ತಯಾರಿಯ ಮುಹೂರ್ತ

     
        ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆಬ್ರವರಿ 18 ರಿಂದ 24ರ ವರೆಗೆ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದಲ್ಲಿ ಉಪಯೋಗಿಸಲಿರುವ ವಿವಿಧ ವಸ್ತುಗಳನ್ನು ಹಿಂದೂ ಸಮಾಜದ ವಿವಿಧ ಸಮುದಾಯಗಳವರು ತಮ್ಮ ಕುಲವೃತ್ತಿಯಂತೆ ತಯಾರಿ ಮಾಡುವ ಮುಹೂರ್ತ ನಡೆಯುತ್ತಿದ್ದು ಅದರಂತೆ `ಕುಲಾಲ ಸಮುದಾಯ'ದವರು ಯಾಗಕ್ಕೆ ಬೇಕಾದ ಮಣ್ಣಿನ ವಿವಿಧ ರೀತಿಯ ಪಾತ್ರೆಗಳು ಮತ್ತು ಅರುಣ ಕೇತುಕ ಚಯನಕ್ಕೆ ಬೇಕಾದ 1200 ಸಣ್ಣಗಾತ್ರದ ಮಣ್ಣಿನ ಪಾತ್ರೆಗಳನ್ನು ತಯಾರಿಸುವ ಮುಹೂರ್ತವನ್ನು ಮಾಣಿಲ ಶ್ರೀ ಧಾಮದ ಪರಮಪೂಜ್ಯ ಶ್ರೀ  ಮೋಹನದಾಸ ಪರಮಹಂಸ ಸ್ವಾಮೀಜಿಯವರ, ಕೊಂಡೆವೂರಿನ ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪೈವಳಿಕೆಯ ಕಾಯರ್‍ಕಟ್ಟೆ-ಲಾಲ್‍ಭಾಗ್‍ನ ಕುಲಾಲ ಸಮಾಜ ಮಂದಿರದಲ್ಲಿ ಸೋಮವಾರ ನಡೆಸಿದರು. ಇಲ್ಲಿ ಉಪಸ್ಥಿತರಿದ್ದ ಕುಲಾಲ ಸಮಾಜ ಬಾಂಧವರು ಜೊತೆಗೆ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಸಿದರು. ನಂತರ ಪೂಜೆ ಮತ್ತು ಯತಿದ್ವಯರು ಸತ್ಸಂಗಗಳನ್ನು ನೆರವೇರಿಸಿದರು.
    ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆಯ ವೇದಮೂರ್ತಿ ಹರಿನಾರಾಯಣ ಮಯ್ಯ, ಪೈವಳಿಕೆ ಗ್ರಾಮಪಂಚಾಯತಿ ಸದಸ್ಯ ಹರೀಶ್ ಬೊಟ್ಟಾರಿ, ಹರಿಶ್ಚಂದ್ರ ಮಂಜೇಶ್ವರ, ಬಾಲಕೃಷ್ಣ ದೀಕ್ಷಾ ಕುಂಜತ್ತೂರುಪದವು, ಕಾಸರಗೋಡು ಜಿಲ್ಲಾ ಕುಲಾಲ ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ ಎಸ್ ಬಂಗೇರ, ಕುಲಾಲ ಸಂಘ ಕಾಸರಗೋಡು ಜಿಲ್ಲೆ, ಪೈವಳಿಕೆ ಶಾಖೆ ಅಧ್ಯಕ್ಷ ಪೂವಪ್ಪ ಮುನ್ನಿಪ್ಪಾಡಿ, ಕುಲಾಲ ಸಮುದಾಯದ ಪ್ರಮುಖರಾದ ಶ್ರೀನಿವಾಸ್ ಕೋರಿಕ್ಕಾರ್, ಪಾಣಾಜೆ ಬಾಬು ಮತ್ತು ಪ್ರಮೀಳಾ ಮಾಧವ ಉಪಸ್ಥಿತರಿದ್ದರು. ದೀಪ್ತಿ ಮತ್ತು ಬಳಗದವರ ಪ್ರಾರ್ಥನೆಯಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಮೀಯಪದವಿನ ದಾಮೋದರ ಮಾಸ್ತರ್ ಸ್ವಾಗತಿಸಿ,  ವಿಶ್ವನಾಥ ಮಾಣಿಪ್ಪಾಡಿ ವಂದಿಸಿದರು. ಸದಾನಂದ ಅಮ್ಮೇರಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries