HEALTH TIPS

ಯಶವಂತಪುರ-ಕಣ್ಣೂರು ಎಕ್ಸ್ ಪ್ರೆಸ್ ಯಶವಂತಪುರದಿಂದ ನಿರ್ಗಮನಕ್ಕೆ ಒತ್ತಾಯ

ಬೆಂಗಳೂರು: ಯಶವಂತಪುರ-ಕಣ್ಣೂರು ಎಕ್ಸ್ ಪ್ರೆಸ್ ರೈಲು ಬಾಣಸವಾಡಿ ಬದಲು ಯಶವಂತಪುರದಿಂದ ನಿರ್ಗಮಿಸಬೇಕು ಎಂದು ಕರ್ನಾಟಕ-ಕೇರಳ ಪ್ರಯಾಣಿಕರ ವೇದಿಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದೆ. ಫೆಬ್ರವರಿ 4ರಂದು ರೈಲಿನ ನಿರ್ಗಮ ಕೇಂದ್ರವನ್ನು ಬಾಣಸವಾಡಿಗೆ ವರ್ಗಾಯಿಸಲಾಗಿದೆ. ಕರ್ನಾಟಕ ಪ್ರವಾಸಿ ಕಾಂಗ್ರೆಸ್ ನ ಕಾರ್ಯಕಾರಿ ಅಧ್ಯಕ್ಷ ವೇಣು ಥೋಮಸ್, ಖಾಸಗಿ ಬಸ್ ಗಳ ಲಾಬಿಗೆ ರೈಲ್ವೆ ಅಧಿಕಾರಿಗಳು ಮಣಿಯುತ್ತಿದ್ದಾರೆ. ಕಣ್ಣೂರಿಗೆ ರೈಲಿನ ಟಿಕೆಟ್ ದರ 400 ರೂಪಾಯಿ, ಬಸ್ಸು ಪ್ರಯಾಣದ ವೆಚ್ಚ 900 ರೂಪಾಯಿಯಾಗಿದೆ. ಯಶವಂತಪುರ ಸುತ್ತಮುತ್ತ ಇರುವವರು ಈ ರೈಲಿನಲ್ಲಿ ಪ್ರಯಾಣಿಸಲು 300ರಿಂದ 400 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಯಶವಂತಪುರಕ್ಕೆ ಮೆಟ್ರೊ ಮತ್ತು ಇತರ ವಾಹನಗಳ ಸಂಚಾರ ವ್ಯವಸ್ಥೆ ಚೆನ್ನಾಗಿದೆ, ಆದರೆ ಬಾಣಸವಾಡಿಗೆ ಆ ವ್ಯವಸ್ಥೆಯಿಲ್ಲ, ಇದರಿಂದ ಪ್ರಯಾಣಿಕರಿಗೆ ಅಲ್ಲಿಗೆ ಹೋಗಲು ಕಷ್ಟವಾಗುತ್ತಿದೆ ಎಂದರು. ಯಶವಂತಪುರದಿಂದ ರೈಲು ಹೊರಟರೆ ಸಾಕಷ್ಟು ಪ್ರಯಾಣಿಕರಿರುತ್ತಾರೆ, ಆದರೆ ಬಾಣಸವಾಡಿಯಿಂದ ನಿರ್ಗಮಿಸುವಾಗ ಅರ್ಧದಷ್ಟು ಪ್ರಯಾಣಿಕರು ಕೂಡ ಇರುವುದಿಲ್ಲ. ಖಾಸಗಿ ಬಸ್ಸುಗಳಲ್ಲಿ ಸಾಕಷ್ಟು ಜನರಿರುತ್ತಾರೆ. ಯಶವಂತಪುರದಿಂದ ರಾತ್ರಿ 8.25ಕ್ಕೆ ನಿರ್ಗಮಿಸುತ್ತಿದ್ದ ರೈಲು ಬಾಣಸವಾಡಿಯಿಂದ 2-3 ಗಂಟೆ ತಡವಾಗಿ ಹೋಗುತ್ತದೆ ಎನ್ನುತ್ತಾರೆ ಎಂದು ಪರಿಸ್ಥಿತಿಯನ್ನು ವಿವರಿಸಿದರು. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಆಶ್ಚರ್ಯ ಮೂಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries