ಕಕ್ಕೆಪ್ಪಾಡಿಯಲ್ಲಿ ದೈವಗಳ ನೇಮೋತ್ಸವ
0
ಮಾರ್ಚ್ 19, 2019
ಕುಂಬಳೆ: ಪುತ್ತಿಗೆ ಕಕ್ಕೆಪ್ಪಾಡಿ ಶ್ರೀಧೂಮಾವತಿ, ಕೋಮರಾಯ, ಚಾಮುಂಡೇಶ್ವರಿ, ಬಬ್ಬರ್ಯ, ಅಣ್ಣಪ್ಪ ಪಂಜುರ್ಲಿ ಹಾಗೂ ಗುಳಿಗ-ಕೊರತಿ ದೈವಕ್ಷೇತ್ರದಲ್ಲಿ ಸೋಮವಾರದಿಂದ ನೇಮೋತ್ಸವ ಆರಂಭಗೊಂಡಿದೆ.
ಇಂದು ಸಂಜೆ 5ಕ್ಕೆ ದೈವಗಳ ವಿಶ್ರಾಂತಿ ಪೀಠ ಪ್ರತಿಷ್ಠೆಯನ್ನು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರು ನೆರವೇರಿಸುವರು. ರಾತ್ರಿ 10 ರಿಂದ ದೈವಗಳ ನೇಮೋತ್ಸವ ಆರಂಭಗೊಳ್ಳಲಿದೆ.

