ಕಾಸರಗೋಡು: ಜಿಲ್ಲಾಡಳಿತೆ ಜಾರಿಗೊಳಿಸುವ ತೀವ್ರ ಶುಚಿತ್ವ ಯಜ್ಞದ ನಂತರವೂ ಹೆದ್ದಾರಿ ಬದಿ ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವುದಾಗಿ ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಮುನ್ನೆಚ್ಚರಿಕೆ ನೀಡಿದ್ದಾರೆ.
ಹೆದ್ದಾರಿ ಬದಿ, ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ತಂದು ಸುರಿಯುವವರ ವಿರುದ್ಧ ದುರಂತ ನಿವಾರಣೆ ಕಾಯಿದೆ ಸಹಿತ ಕಾನೂನು ಕ್ರಮ ನಡೆಸುವುದಾಗಿ ಅವರು ತಿಳಿಸಿರುವರು.
ಈ ರೀತಿಯ ತ್ಯಾಜ್ಯ ಎಸೆತದ ಪರಿಣಾಮ ತೀವ್ರತರ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ಬೀದಿನಾಯಿಗಳ ಕಾಟ, ಜಲಾಶಯಗಳ ವಿನಾಶ ಇತ್ಯಾದಿ ಗಂಭೀರ ಸಮಸ್ಯೆಗಳಿಗೆ ಇದು ಕಾರಣವಾಗಲಿದೆ. ಘನ ತ್ಯಾಜ್ಯ ಪರಿಷ್ಕರಣೆ ಕಾಯಿದೆ 4(2), ಪರಿಸರ ಸಂರಕ್ಷಣೆ ಕಾಯಿದೆ 1986, ಕಾಯಿದೆ 15 ಪ್ರಕಾರ 5 ವರ್ಷ ವರೆಗೆ ಸಜೆ ಅಥವಾ ಒಂದು ಲಕ್ಷ ರೂ. ದಂಡ ಅಥವಾ ಎರಡೂ ಸಜೆ ಜೊತೆಗೆ ಲಭಿಸಬಹುದಾದ ಅಪರಾ`Àವಿದು. ಹರಿತ ಕೇರಳವನ್ನು ಮಲಿನಗೊಳಿಸುವವರ ವಿರುದ್ಧ ಯಾವುದೇ ತಾರತಮ್ಯವಿಲ್ಲದೆ ಕ್ರಮಕೈಗೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಜಲಾಶಯಗಳ ಮಲಿನೀಕರಣ : ಸಜೆ ಮತ್ತು ದಂಡ : ಜಲಾಶಯಗಳನ್ನು ಮಲಿನಗೊಳಿಸುವುದು ಮೂರು ವರ್ಷ ವರೆಗಿನ ಸಜೆ ಅಥವಾ 2 ಲಕ್ಷ ರೂ. ದಂಡ ಯಾ ಎರಡೂ ಶಿಕ್ಷೆ ಜತೆಗೆ ನೀಡಬಹುದಾದ ಅಪರಾಭವಾಗಿದೆ.
ರಾಜ್ಯ ನೀರಾವರಿ ಮತ್ತು ಜಲಸಂರಕ್ಷಣೆ ಕಾಯಿದೆ 2003 ಸೆಕ್ಷನ್ 70(3)72 ಸಿ. ಪ್ರಕಾರ ಈ ಶಿಕ್ಷೆ ವಿ„ಸಲಾಗುವುದು. ನ್ಯಾಯಾಲಯವೊಂದರಲ್ಲಿ ಈ ಸಂಬಂ`À ಆರೋಪಿ ಅಪರಾ„ಯೆಂದು ತೀರ್ಪಿಗೊಳಗಾದರೆ ಈ ಶಿಕ್ಷೆ ನೀಡಲಾಗುವುದು. ಕೇರಳ ಪಂಚಾಯತ್ ರಾಜ್ ಕಾಯಿದೆ 1994 ಸೆಕ್ಷನ್ 219 ಎಸ್ ಸೆಕ್ಷನ್ 29(ಟಿ) ಕೇರಳ ಮುನಿಸಿಪಾಲಿಟಿ ಕಾಯಿದೆ 1994 ಸೆಕ್ಷನ್ 340(ಎ) ಪ್ರಕಾರ 10 ಸಾವಿರ ರೂ.ಗಿಂತ ಕಡಿಮೆಯಾಗದ 25 ಸಾವಿರ ರೂ.ಗಿಂತ ಅ„ಕವಾಗದ ದಂಡ ಮತ್ತು 6 ತಿಂಗಳಿಗಿಂತ ಕಡಿಮೆಯಲ್ಲದ ಮತ್ತು ಒಂದು ವರ್ಷಕ್ಕಿಂತ ಅ„ಕವಲ್ಲದ ಸಜೆ ಲಭಿಸಬಹುದಾಗಿದೆ. ಗ್ರಾಮ ಪಂಚಾಯತ್, ನಗರಸಭೆ ಕಾರ್ಯದರ್ಶಿ, ಪೆÇಲೀಸರು, ತ್ಯಾಜ್ಯ ನಿಯಂತ್ರಣ ಮಂಡಳಿ ಜಿಲ್ಲಾ ಸಿಬ್ಬಂದಿ ಈ ಸಂಬಂಧ ಕ್ರಮಕೈಗೊಳ್ಳಬಹುದಾಗಿದೆ.
ಜಲಾಶಯ, ಜಲಮೂಲ, ಜಲವಿತರಣೆ ಸೌಲಭ್ಯಗಳನ್ನು ಮಲಿನಗೊಳಿಸುವ ರೀತಿ ತ್ಯಾಜ್ಯ ಹರಿಯ ಬಿಟ್ಟರೆ ಅದು ಶಿಕ್ಷಾರ್ಹವಾಗಿದೆ. ಜಲಮಲಿನೀಕರಣ(ನಿಯಂತ್ರಣ ಮತ್ತು ನಿವಾರಣೆ) ಕಾಯಿದೆ 1974 ಸೆಕ್ಷನ್ 43 ಪ್ರಕಾರ ಒಂದೂವರೆ ವರ್ಷಕ್ಕಿಂತ ಕಡಿಮೆಯಾಗದ, 6 ವರ್ಷ ಕ್ಕಿಂತ ಅ„ಕವಲ್ಲದ ಸಜೆ ಸಿಗಬಹುದಾಗಿದೆ.
ಪ್ರತ್ಯೇಕ ಸ್ಕ್ವಾಡ್ಗಳ ರಚನೆ : ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪ್ರತ್ಯೇಕ ಸ್ಕ್ವಾಡ್ಗಳನ್ನು ರಚಿಸಲಾಗುವುದು ಎಂದು ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಸಾರ್ವಜನಿಕ ಆರೋಗ್ಯ ಸಂರಕ್ಷಣೆ ಪರಿಶೀಲಿಸಿ ಈ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು. ಪೆÇಲೀಸ್, ಕಂದಾಯ, ಗ್ರಾಮ ಪಂಚಾಯತ್ ಮತ್ತು ನಗರಸಭೆ ಸಿಬ್ಬಂದಿ ಸೇರಿ ಸ್ಕ್ವಾಡ್ ರಚಿಸಲಾಗುವುದು. ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೂ ಇರುವರು.
ತೀವ್ರ ಶುಚೀಕರಣ ಯಜ್ಞ : ಸುಮಾರು 4 ಸಾವಿರ ಮಂದಿ ಭಾಗಿ : ಜಿಲ್ಲಾಡಳಿತೆಯ ನೇತೃತ್ವದಲ್ಲಿ ಜಿಲ್ಲೆಯ ಹೆದ್ದಾರಿ ಬದಿ ನಡೆಸಲಾದ ತೀವ್ರ ಶುಚೀಕರಣ ಯಜ್ಞದಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಶ್ರಮದಾನ ನಡೆಸಿದರು. 15 ಮೆಟ್ರಿಕ್ ಟನ್ ತ್ಯಾಜ್ಯ ಈ ಮೂಲಕ ಸಂಗ್ರಹಿಸಲಾಗಿದೆ. 2600 ಮಂದಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಸಿಬ್ಬಂದಿ, ಶಿಕ್ಷಕರು, ಉದ್ಯೋಗ ಖಾತರಿ ಯೋಜನೆ ಕಾರ್ಯಕರ್ತರು ಹೀಗೆ ಮಂದಿ ಈ ಕಾಯಕ ನಡೆಸಿದ್ದರು.


