ಕಾಸರಗೋಡು: ಜಿಲ್ಲೆಯಲ್ಲಿ 300 ಚದರ ಅಡಿ ವಿಸ್ತೀರ್ಣ ವರೆಗಿನ ಜಾಗಗಳಲ್ಲಿ ಮಣ್ಣು ಅಗೆಯುವ ವಿಚಾರಕ್ಕೆ ಸಂಬಂಧಿಸಿ ಸ್ಥಳೀಯಾಡಳಿತ ಸಂಸ್ಥೆಗಳು ಲ್ಯಾಂಡ್ ಡೆವೆಲಪ್ ಮೆಂಟ್ ಪರವಾನಗಿ ನೀಡುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಆದೇಶಿಸಿದೆ.
ಜಿಲ್ಲಾಧಿಕಾರಿ ಕಚೇರಿಕಿರು ಸಭಾಂಗಣದಲ್ಲಿ ಶನಿವಾರ ನಡೆದ ಸಭೆ ಈ ವಿಚಾರ ತಿಳಿಸಿದೆ.
ಪರವಾನಗಿ ಸಹಿತ ಅರ್ಜಿ ಸಲ್ಲಿಸಿದರೆ ಟ್ರಾನ್ಸಿಟಿಪಾಸ್ ನೀಡುವಲಿ ಜಿಯಾಲಜಿಸ್ಟ್ ಸೂಕ್ತ ಕ್ರಮಕೈಗೊಳ್ಳುವಂತೆ ಸಭೆ ನಿರ್ದೇಶನ ನೀಡಿದೆ. ಈ ಸಂಬಂಧ ಜಿಲ್ಲಾ ಯೋಜನೆ ಅಧಿಕಾರಿ ಸರಕಾರಕ್ಕೆ ಪತ್ರ ರವಾನಿಸಿದ್ದಾರೆ. 300 ಚದರ ಅಡಿ ವರೆಗಿನ ಮನೆ ನಿರ್ಮಾಣಕ್ಕೆ ಜಾಗವನ್ನು ಸಮತಟ್ಟುಗೊಳಿಸುವ ನಿಟ್ಟಿನಲಲಿ ಮಣ್ಣು ಅಗೆಯುವುದಿದ್ದಲ್ಲಿ ಕ್ವಾರಿಂಗ್ ಪರವಾನಗಿಯ ಅಗತ್ಯವಿಲ್ಲ. ಆದುದರಿಂದ ಜಿಲ್ಲೆಯ ಗ್ರಾಮಪಂಚಾಯತ್ ಗಲಲ್ಲಿ ಈ ಪರಿಧಿಯ ಮನೆಗಳ ನಿರ್ಮಾಣಕ್ಕೆ ಮಣ್ಣು ತೆರವುಗೊಳಿಸುವುದಿದ್ದರೆ ಅಭಿವೃದ್ಧಿ ಪರವಾನಗಿ ಅನುಮತಿ ನೀಡುವಂತೆ ಸಭೆ ಗ್ರಾಮಪಂಚಾಯತ್ ಕಾರ್ಯದರ್ಶಿಗಳಿಗೆ ಆದೇಶ ನೀಡಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲ್, ಕೆ.ಕುಂ ಞÂ ರಾಮನ್ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್, ಕಾಂ ಞÂ ಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ನೀಲೇಶ್ವರ ನಗರಸಭೆ ಉಪಾಧ್ಯಕ್ಷೆ ವಿ.ಗೌರಿ, ಗ್ರಾಮಪಚಾಯತ್ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಎ.ಎ.ಜಲೀಲ್, ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು, ಲೀಡ್ ಬ್ಯಾಂಕ್ ಪ್ರಬಂಧಕ ಕಣ್ಣನ್, ಸಂಸದರ ಪ್ರತಿನಿಧಿ ನ್ಯಾವಾದಿ ಗೋವಿಂದನ್ ನಾಯರ್ ಮೊದಲಾದವರು ಉಪಸ್ಥಿತರಿದ್ದರು.