HEALTH TIPS

ಮರ್ಚೆಂಟ್ ನೇವಿ ಯೂತ್ ವಿಂಗ್ ಪರಿಸರ ದಿನಾಚರಣೆ


       ಮುಳ್ಳೇರಿಯ: ಪರಿಸರ ದಿನಾಚರಣೆಯ ಅಂಗವಾಗಿ ಮರ್ಚೆಂಟ್ ನೇವಿ ಯೂತ್ ವಿಂಗ್‍ನ ಬೇವು ಮರದ ಚಪ್ಪರ ಎಂಬ ಕಾರ್ಯಕ್ರಮ ಬೇಕಲ ಫಿಶರೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಪರಿಸರ ಕಾರ್ಯಕರ್ತ ಆನಂದ್ ಪೇಕ್ಕಡಂ ಅವರು ಬೇವಿನ ಸಸಿ ನೆಡುವುದರ ಮೂಲಕ ಉದ್ಘಾಟಿಸಿದರು. ಬೇವಿನ ವಿವಿಧ ಗುಣಗಳ ಕುರಿತು ಆನಂದ್ ಪೇಕ್ಕಡಂ ಅವರು ವಿವರಿಸಿದರು. ಗತ ವರ್ಷಗಳಲ್ಲಿ ಪರಿಸರ ದಿನಾಚರಣೆಯಂದು ವಿವಿಧ ತಳಿಯ ಸಸಿಗಳನ್ನು ನೆಡಲಾಗುತ್ತಿತ್ತು. ಯೂತ್ ವಿಂಗ್ ಕರ್ಯದರ್ಶಿ ರಾಜೇಂದ್ರನ್ ಮುದಿಯಕ್ಕಾಲ್, ಸಂತೋಷ್ ತೆಕ್ಲಿ, ರಾಜೇಂದ್ರನ್ ಕಣಿಯಂಬಾಡಿ, ಉಣ್ಣಿಕೃಷ್ಣನ್, ಕುದಿರಕ್ಕೋಡು, ಕೃಷ್ಣನ್ ಅರವತ್, ಮಣಿ ಅಚ್ಚೇರಿ, ವಸಂತ ಕುಮಾರ್, ಮನೋಜ್ ಪಳ್ಳಂ, ಅಶೋಕ್ ಕುಮಾರ್, ಮನೋಜ್, ಶಾಲಾ ಮುಖ್ಯೋಪಾಧ್ಯಾಯ ಕೆ. ಜಯಪ್ರಕಾಶ್ ಅರವತ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries