HEALTH TIPS

ಯುವ ಕ್ರೀಡಾಳುಗಳನ್ನು ಪ್ರೋತ್ಸಾಹಿಸಲು ಗದ್ದೆಗಿಳಿದ ಗ್ರಾ.ಪಂ.ಉಪಾಧ್ಯಕ್ಷ

             
     ಚಿತ್ರ ಸುದ್ದಿ: ಪೆರ್ಲ: ಸದಾ ರಾಜಕೀಯ ಮತ್ತು ಆಡಳಿತಾತ್ಮಕ ಚಿಂತೆಯಲ್ಲಿ ಬಿಝಿ ಯಾಗಿರುವ ರಾಜಕಾರಣಿಗಳು ತಮ್ಮ ಮುಖದ ಬಿಗುವನ್ನು ಸಡಿಲಿಸುವಲ್ಲಿ ಕ್ರೀಡಾ ಸಾಂಸ್ಕøತಿಕ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಸ್ವರ್ಗ ಸಮೀಪದ ಬಜಕ್ಕುಡೆಯಲ್ಲಿ ಸ್ವರ್ಗ ವಾರ್ಡಿನ ಕುಟುಂಬಶ್ರೀ ಸಿ.ಡಿ.ಯಸ್, ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಹಾಗೂ ಮಾತೃಭೂಮಿ ಸ್ವರ್ಗದ ನೇತೃತ್ವದಲ್ಲಿ ಭಾನುವಾರ ನಡೆದ ಕೆಸರು ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮದಲ್ಲಿ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯ ಸಂದರ್ಭ ಎಣ್ಮಕಜೆ ಗ್ರಾ.ಪಂ. ಉಪಾಧ್ಯಕ್ಷ ಅಬೂಕರ್ ಸಿದ್ದೀಕ್ ಖಂಡಿಗೆ ಅವರು ಹಠಾತ್ ಗದ್ದೆಗಿಳಿದು ಚಕಿತಗೊಳಿಸುವುದರ ಜೊತೆಗೆ ಆಟಗಾರರನ್ನು ಹುರಿದುಂಬಿಸಿದರು. ಗ್ರಾ.ಪಂ. ಉಪಾಧ್ಯಕ್ಷರ ಈ ವಿದ್ಯಮಾನ ನೆರೆದವರನ್ನು ಖುಷಿಗೊಳಿಸುವ ಜೊತೆಗೆ ಕ್ರೀಡಾಳುಗಳ ಉತ್ಸಾಹಕ್ಕೆ ಬಲ ನೀಡಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries